ಮಂಗಳೂರು : ನಿವೃತ್ತ ಪೊಲೀಸ್‌ ಅಧಿಕಾರಿ ಖಾತೆಯಿಂದ 6 ಲಕ್ಷ ಲಪಟಾಯಿಸಿದ ಖದೀಮರು -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬ್ಯಾಂಕ್‌ ಅಧಿಕಾರಿಗಳೆಂದು ನಂಬಿಸಿ ಕರೆ ಮಾಡಿ ಒಟಿಪಿ ನಂಬರ್‌ ಪಡೆದು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರ ಬ್ಯಾಂಕ್‌ ಖಾತೆಯಿಂದ 6.24 ಲಕ್ಷ ರೂ. ಮೊತ್ತವನ್ನು ಲಪಟಾಯಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ರೂಪಾಂತರ ವೈರಾಣು ಪತ್ತೆ -Vishwanews24

ಬಂದರು ರಸ್ತೆಯಲ್ಲಿರುವ ಸ್ಟೇಟ್‌ಬ್ಯಾಂಕ್‌ ಖಾತೆಯಿಂದ 2 ಲಕ್ಷ ರೂ. ಕಡಿತಗೊಂಡಿದ್ದು, ಅದರ ಮರುಪಾವತಿಗೆ ಒಟಿಪಿ ನಂಬರ್‌ ಹೇಳುವಂತೆ ಕೋರಿದ್ದರು.

ಇದನ್ನು ನಿಜವೆಂದೇ ನಂಬಿದ ಈ ಅಧಿಕಾರಿಯ ಪುತ್ರ, ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆಯನ್ನು ಹೇಳಿದ್ದರು. ಸ್ವಲ್ಪ ಹೊತ್ತಿನಲ್ಲಿ ಸ್ವಲ್ಪ ಸ್ವಲ್ಪವೇ ಮೊತ್ತ ಖಾತೆಯಿಂದ ಕಡಿತಗೊಳ್ಳುತ್ತಿರುವ ಬಗ್ಗೆ ಮೊಬೈಲ್‌ಗೆ ಎಸ್‌ಎಂಎಸ್‌ ಬರಲಾರಂಭಿಸಿತು. ಕೊನೆಗೆ ಎಸ್‌ಬಿಐ ಖಾತೆಯಲ್ಲಿದ್ದ ಪೂರ್ತಿ 6.24 ಲಕ್ಷ ರೂ. ಖೋತಾ ಆಗಿತ್ತು.

ಹರ್ ಹರ್ ಮಹಾದೇವ್ : ದೇಶದ ಜನತೆಗೆ ಮಹಾಶಿವರಾತ್ರಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ -Vishwanews24

ಇದರಿಂದ ದಿಗಿಲುಗೊಂಡ ಅಧಿಕಾರಿ ಮರುದಿನ ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ಹೊಸದಿಲ್ಲಿಯ ನಾನಾ ಬ್ಯಾಂಕ್‌ಗಳ ಖಾತೆಗಳಿಗೆ ಜಮೆ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಅವರು ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ

ಉಡುಪಿ :ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ ; ಮಾ. 15,16ಕ್ಕೆ ಬ್ಯಾಂಕ್ ಬಂದ್ -Vishwanews24