ಮಂಗಳೂರು: ಮಾದಕ ದ್ರವ್ಯ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಲು ಸಜ್ಜು, ಬೀಚ್ ಪ್ರದೇಶಗಳಲ್ಲಿ ಮದ್ಯಪಾನ ಸೇವನೆ ಮಾಡಿದರೆ ಕಠಿಣ ಕ್ರಮ :ಪೋಲಿಸ್ ಆಯುಕ್ತ ಶಶಿ ಕುಮಾರ್ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಮಾದಕ ದ್ರವ್ಯ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಲು ಸಜ್ಜು,

ಬೀಚ್ ಪ್ರದೇಶಗಳಲ್ಲಿ ಮದ್ಯಪಾನ ಸೇವನೆ ಮಾಡಿದರೆ ಕಠಿಣ ಕ್ರಮ :ಪೋಲಿಸ್ ಆಯುಕ್ತ ಶಶಿ ಕುಮಾರ್ –Vishwanews24

ಮಂಗಳೂರು: ಮಾದಕ ದ್ರವ್ಯ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಲು ಸಜ್ಜಾಗಿದ್ದು, ಬೀಚ್ ಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 75ಕ್ಕೂ ಹೆಚ್ಚು ಜನರ ವಶಕ್ಕೆ ಪಡೆಯಲಾಗಿದೆ. ಬೀಚ್ ಪ್ರದೇಶಗಳಲ್ಲಿ ಮದ್ಯಪಾನ ಸೇವನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೋಲಿಸ್ ಆಯುಕ್ತ ಶಶಿ ಕುಮಾರ್ ಹೇಳಿದರು.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಮಂಗಳೂರು ವೈವಿಧ್ಯಮಯವಾದ ನಗರ. ಕಾನೂನ ಸುವ್ಯವಸ್ಥಿತೆಯಲ್ಲಿ ಸೂಕ್ಷ್ಮ ಆಡಳಿತ ಪ್ರದೇಶವಾಗಿದೆ ಎಂದರು.

ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಪೆಡ್ಲರ್ ಗಳ ಪೇರೆಡ್ ಕೂಡ ಮಾಡಲಾಗಿದೆ. ಪೆರೇಡ್ ನಿಂದ ಅವರ ಬದಲಾವಣೆಗೆ ಆದ್ಯತೆ ನೀಡಲಾಗಿದೆ ಎಂದರು.

ಪೋಲಿಸರ ಮೇಲೆ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಕರ್ತವ್ಯ ನಿರತ ಸಿಬ್ಬಂದಿಗಳಿಗೆ ತೊಂದರೆ ನೀಡಿದಲ್ಲಿ ಅಂತವರ ಮೇಲೆ ಗಂಭೀರ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಮಂಗಳೂರು ಪೋಲಿಸ್ ಆಯುಕ್ತ ಶಶಿಕುಮಾರ ಹೇಳಿದರು.

http://ಕೊರೋನಾ ಲಸಿಕೆ ಪೂರೈಕೆ : ಸಂಸ್ಥೆಯ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣ : ಸೀರಮ್ ಇನ್ಸ್ಟಿಟ್ಯೂಟ್ ಮಾಲೀಕ ಆದಾರ್ ಪೂನಾವಾಲಾ -Vishwanews24