ಮಂಗಳೂರು ಮೀನುಗಾರಿಕೆ ವಿ.ವಿ. ಸ್ಥಾಪನೆಗೆ ಹೆಚ್ಚಿದ ಪ್ರಯತ್ನ -Vishwanews24
ಮಂಗಳೂರು ಮೀನುಗಾರಿಕೆ ವಿ.ವಿ. ಸ್ಥಾಪನೆಗೆ ಹೆಚ್ಚಿದ ಪ್ರಯತ್ನ -Vishwanews24
ಮಂಗಳೂರು: ನಗರದ ಮೀನುಗಾರಿಕೆ ಕಾಲೇಜನ್ನು ಕೇಂದ್ರೀಕರಿಸಿ ಕರ್ನಾಟಕ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾ ನಿಲಯ ಸ್ಥಾಪಿಸುವ ಪ್ರಸ್ತಾವನೆಗೆ ಬೀದರ್ನ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ (ಕೆವಿಎಎಫ್ಎಸ್ಯು)ವು ನಕಾರಾತ್ಮಕ ಧೋರಣೆ ತಳೆದಿದ್ದರೂ ಮೀನುಗಾರಿಕೆ ಕಾಲೇಜಿನಿಂದ ಪ್ರಯತ್ನಗಳು ಮುಂದುವರಿದಿವೆ.
ಕೆವಿಎಎಫ್ಎಸ್ ಧೋರಣೆ ಯನ್ನು ಖಂಡಿಸಿ ಮೀನುಗಾರಿಕೆ ಕಾಲೇಜು ಈಗಾಗಲೇ ಪ್ರತಿ ಭಟನ ಪತ್ರವನ್ನು ಕಳುಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೀನುಗಾರಿಕೆ ವಿ.ವಿ. ಸ್ಥಾಪನೆ ಕುರಿತು ಸರಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದ್ದಾರೆ.
53 ವರ್ಷಗಳ ಇತಿಹಾಸವಿರುವ ಮಂಗಳೂರು ಮೀನುಗಾರಿಕೆ ಕಾಲೇಜು ಭಾರತಕ್ಕೆ ಪ್ರಥಮ. ಆದರೆ ಈಗ ತಮಿಳುನಾಡು, ಕೇರಳ, ಮಹಾರಾಷ್ಟ್ರಗಳಲ್ಲಿ ಮೀನುಗಾರಿಕೆ ವಿ.ವಿ. ಮತ್ತು ಅವುಗಳ ಸಂಯೋಜಿತ ಕಾಲೇಜುಗಳಿವೆ. ಒಡಿಶಾ, ತೆಲಂಗಾಣಗಳು ವಿ.ವಿ. ಸ್ಥಾಪಿಸುವ ಬಗ್ಗೆ ಅಧಿ ಸೂಚನೆ ಹೊರಡಿಸಿವೆ. ಆದ್ದರಿಂದ ಈ ಎಲ್ಲ ರಾಜ್ಯಗಳಲ್ಲಿ ಮೀನುಗಾರಿಕೆ ದೊಡ್ಡ ಉದ್ಯಮ ವಾಗಿ ಬೆಳೆದಿದ್ದು ರಾಷ್ಟ್ರ ಮಟ್ಟದಲ್ಲಿ 5ನೇ ಸ್ಥಾನ ದಲ್ಲಿವೆ. ಕರ್ನಾಟಕವು ದೇಶದಲ್ಲಿ 2ನೇ ಅತೀ ದೊಡ್ಡ ಜಲ ಪ್ರದೇಶವನ್ನು ಹೊಂದಿದ್ದರೂ ಮತ್ಸ್ಯ ಕೃಷಿಯಲ್ಲಿ 9-10ನೇ ಸ್ಥಾನದಲ್ಲಿದೆ. ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆಯ ಅಭಿ ವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ಉತ್ತೇಜನದ ಕೊರತೆಯಿಂದಾಗಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ.
ಮೀನುಗಾರರು ಮತ್ತು ಮೀನುಗಾರಿಕೆಯ ಪರವಾಗಿ ಕೆಲಸ ಮಾಡಲು ವಿ.ವಿ.ಯ ಅಗತ್ಯ ವಿದ್ದು, ಮಂಗಳೂರಿನಲ್ಲಿ ಸ್ಥಾಪನೆ ಆಗಲೇಬೇಕು. ಅದಕ್ಕೆ ಸಂಯೋ ಜಿತ ವಾಗಿ 4 ಕಾಲೇಜುಗಳನ್ನು ಆರಂಭಿ ಸಲು ಮತ್ತು ಇತರ ಮೀನು ಗಾರಿಕೆ ಅಭಿವೃದ್ಧಿ ಕೆಲಸ ಗಳನ್ನು ಕೈಗೆತ್ತಿಕೊಳ್ಳಲು ಉದ್ದೇ ಶಿಸ ಲಾಗಿದೆ. ಇದಕ್ಕಾಗಿ ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರ ಜತೆಗೂಡಿ ಸರಕಾರದ ಮೇಲೆ ಒತ್ತಡ ತರುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ
