ಮಂಗಳೂರು :  ಯೋಜನಾ ವಿಭಾಗದ ಜಂಟಿ ನಿರ್ದೇಶಕರ ಮನೆ ಮೇಲೆ  ಎಸಿಬಿ ದಾಳಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು :  ಯೋಜನಾ ವಿಭಾಗದ ಜಂಟಿ ನಿರ್ದೇಶಕರ ಮನೆ ಮೇಲೆ  ಎಸಿಬಿ ದಾಳಿ -Vishwanews24

ಮಂಗಳೂರು : ಮಂಗಳೂರಿನಲ್ಲಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕರ ಮನೆ ಮೇಲೆ ಮಂಗಳವಾರ ಎಸಿಬಿ ದಾಳಿ ನಡೆಸಿದೆ.

ಮಂಗಳೂರು ಪಾಲಿಕೆ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಜಯರಾಜ್‌‌ ಮನೆ ಮೇಲೆ ದಾಳಿ ನಡೆದಿದ್ದು, ಇವರಿಗೆ ಸೇರಿದ ಬಿಜೈ ಕಾಪಿಕಾಡಿನಲ್ಲಿರುವ ಮನೆ ಹಾಗೂ ಮನಪ ಕಚೇರಿಯ ಮೇಲೆ ದಾಳಿ ನಡೆದಿದೆ.

ಇನ್ನು ಕೇರಳದಲ್ಲಿರುವ ಜಯರಾಜ್‌ ಪತ್ನಿಯ ಕ್ವಾಟ್ರಸ್‌‌ ಮೇಲೂ ಕೂಡಾ ಎಸಿಬಿ ಅಧಿಕಾರಿಗಳು ದಾಳಿ ನಡೆದಿದ್ದಾರೆ.ಕೇರಳ ಸೇರಿದಂತೆ ಮಂಗಳೂರಿನಲ್ಲಿ ಅಪಾರ ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆ ಈ ದಾಳಿ ನಡೆದಿದೆ.

ಎಸ್‌‌ಪಿ ಬೋಪಯ್ಯ, ಡಿವೈಎಸ್‌‌ಪಿ ಕೆ.ಸಿ.ಪ್ರಕಾಶ್‌ ಸೇರಿದಂತೆ ಇನ್ಸ್‌ಪೆಕ್ಟರ್‌‌ಗಳಾದ ಶ್ಯಾಂಸುಂದರ್‌‌, ಗುರುರಾಜ್‌ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.