ಮಂಗಳೂರು:ಮಂಗಳೂರು : ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ : ಜನಾರ್ದನ ಪೂಜಾರಿ – Vishwanews24
ಮಂಗಳೂರು : ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ : ಜನಾರ್ದನ ಪೂಜಾರಿ – Vishwanews24
26ರಂದು ಜನಾರ್ದನ ಪೂಜಾರಿ ನೇತೃತ್ವದಲ್ಲಿ ಜಾಥಾ..
ಮಂಗಳೂರು: ಹೊಸದಿಲ್ಲಿಯಲ್ಲಿ ಗಣರಾಜ್ಯೋತ್ಸವದ ಪರೇಡ್ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ.
ಜ. 26ರಂದು ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಕೂಡುವಿಕೆಯಿಂದ ಪ್ರತೀ ತಾಲೂಕುಗಳಲ್ಲಿ ಆಯೋಜಿಸಲಾದ ಟ್ಯಾಬ್ಲೋ ಮೆರವಣಿಗೆ ಜಾತಿ, ಮತ, ಪಂಥ ಭೇದ ಮರೆತು ಎಲ್ಲರೂ ಬೆಂಬಲಿಸಬೇಕಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಗುರುಗಳ ವಿಷಯದಲ್ಲಿ ರಾಜಕೀಯ ಸಲ್ಲದು. ಈ ಬಗ್ಗೆ ಗುರುಗಳ ಅನುಯಾಯಿಗಳು ಕೇಂದ್ರದ ನಿರ್ಧಾರವನ್ನು ಖಂಡಿಸಬೇಕು. ಜ.26ರಂದು ನಡೆಯುವ ಜಾಥಾವನ್ನು ಜಾತಿ, ಮತ, ಪಂಥ ಮರೆತು ಬೆಂಬಲಿಸೋಣ. ಗುರುಗಳ ತತ್ತ್ವದಂತೆ ಸಂಘರ್ಷ ರಹಿತವಾಗಿ ನಾವು ನಮ್ಮ ಹಕ್ಕು ಮಂಡಿಸೋಣ. ಇದು ಯಾರ ವಿರುದ್ಧವೂ ಪ್ರತಿಭಟನೆಯಲ್ಲ, ಗುರುದೇವರ ಭಕ್ತರಿಗೆ ಸ್ವಾಭಿಮಾನ ದಿನವಾಗಲಿ ಎಂದು ತಿಳಿಸಿದ್ದಾರೆ.
ಅಂದಿನ ದಿನ ಹಳದಿ ವಸ್ತ್ರಧಾರಣೆ ಮಾಡಿ ಎಲ್ಲ ನಾರಾಯಣ ಗುರು ಸಂಘಗಳಲ್ಲಿ ಗುರುದೇವರಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಮಾಡಬೇಕಿದೆ. ಇದು ಯಾರ ವಿರುದ್ಧವೂ ಪ್ರತಿಭಟನೆ ಅಲ್ಲ; ಇದು ಗುರುದೇವರ ಭಕ್ತರಿಗೆ ಸ್ವಾಭಿಮಾನ ದಿನ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ನಾರಾಯಣ ಗುರುಗಳ ಪ್ರತಿಕೃತಿ ನಿರಾಕರಣೆ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಜ.26ರಂದು ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಜಾಥಾ ನಡೆಯಲಿದೆ.
ಮಂಗಳೂರು: ಹಣ ಡಬಲ್ ಮಾಡಿ ಕೊಡುವ ಭರವಸೆ ನೀಡಿ ವಂಚನೆ : ಪ್ರಕರಣ ದಾಖಲು – Vishwanews24
