ಮಣಿಪಾಲ: ಮೆದುಳು ಜ್ವರ ವೈರಸ್‌ನಿಂದ ಹರಡುವ ಕಾಯಿಲೆ , ಲಸಿಕೆ ಪಡೆಯಲು ಭಯಬೇಡ – Vishwanews24

Featured, ಉಡುಪಿ

1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು..

ಮಣಿಪಾಲ: ಮೆದುಳು ಜ್ವರ ವೈರಸ್‌ನಿಂದ ಹರಡುವ ಕಾಯಿಲೆ. ಬ್ಯಾಕ್ಟೀರಿಯಾದಿಂದ ಹಬ್ಬಿದರೆ ಇದಕ್ಕೆ ಆಯಂಟಿಬಯೋಟಿಕ್‌ ಲಭ್ಯವಿದೆ. ಆದರೆ ವೈರಸ್‌ ರೋಗಕ್ಕೆ ಆಯಂಟಿಬಯೋಟಿಕ್‌ ಇಲ್ಲ. ಈ ನಿಟ್ಟಿನಲ್ಲಿ 1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು, ಭಯ ಬೇಡ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಮತ್ತು ಮಣಿಪಾಲ ಕೆಎಂಸಿ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಲೆಸ್ಲಿ ಲೂವಿಸ್‌ ಹೇಳಿದರು.

ಜೆಇ ಲಸಿಕೆ ಪಡೆಯದೆ ಮೆದುಳು ಜ್ವರ ಬಾಧಿಸಿದವರಿಗೆ ಜ್ವರ, ಮೈಕೈ ನೋವು, ವಾಂತಿ, ಫಿಟ್ಸ್‌, ಮಾತನಾಡಲಾಗದ ಸ್ಥಿತಿಯೂ ಎದುರಾಗಬಹುದು. ಪೂರ್ಣ ಗುಣಮುಖರಾಗುವುದು ಕಷ್ಟ. ಸಾವು ಬಂದರೂ ಅಚ್ಚರಿಯಲ್ಲ. ಒಂದು ಬಾರಿ ಮೆದುಳು ನಿಷ್ಕ್ರಿಯಗೊಂಡರೆ ಸರಿಪಡಿಸುವುದು ಕಷ್ಟ ಎಂದರು.

ಕಾಪು: ಇಂದಿನಿಂದ ಕಡಲ ಐಸಿರ –ಬೀಚ್‌ ಫೆಸ್ಟ್‌ – Vishwanews24

ಹರಡುವ ಬಗೆ ಹೇಗೆ?:

ಹಂದಿಗಳಿಂದ ಪಕ್ಷಿ, ಪಕ್ಷಿಗಳಿಂದ ಸೊಳ್ಳೆ, ಸೊಳ್ಳೆಯಿಂದ ಮನುಷ್ಯರಿಗೆ, ಕೊಕ್ಕರೆಯಂತಹ ಪಕ್ಷಿಗಳಿಂದ ಇದು ಹೆಚ್ಚಾಗಿ ಹರಡುತ್ತದೆ. ಜೂನ್‌ನಿಂದ ಜನವರಿ ವರೆಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಎಂದರು.

ಕಲ್ಪತರು ನಾಡಿನಲ್ಲಿ ಮೆದುಳು ಜ್ವರ, ಆತಂಕದಲ್ಲಿ ಜನತೆ - Eesanje

ಲಕ್ಷಣಗಳೇನು?:

3ರಿಂದ 5 ದಿನ ಜ್ವರವಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಮಲಗುತ್ತಾರೆ. ನಡೆದಾಡಲು, ಮಾತನಾಡಲು, ನುಂಗಲು ಕಷ್ಟವಾಗುವುದು ಮೆದುಳು ಜ್ವರದ ಲಕ್ಷಣಗಳಾಗಿವೆ. ಶಾಲೆಗೆ ಹೋಗುವ ಮಕ್ಕಳು ಉತ್ಸಾಹದಿಂದ ಇರದಿರುವುದೂ ಕೂಡ ಇದರ ಮುನ್ಸೂಚನೆಯಾಗಿದೆ.

ಡಿ. 25ರ ವರೆಗೆ ಉಚಿತ ಲಸಿಕೆ: ಜೆಇ ಲಸಿಕೆ ತೆಗೆದುಕೊಂಡರೆ ಅಡ್ಡಪರಿಣಾಮವಿಲ್ಲ. ಜ್ವರ, ಸಾಮಾನ್ಯ ಜ್ವರ, ಇಂಜೆಕ್ಷನ್‌ ನೀಡಿದ ಜಾಗದಲ್ಲಿ ನೋವು, ಸುಸ್ತು ಉಂಟಾಗಬಹುದು. 2-3 ದಿನದಲ್ಲಿ ಗುಣಮುಖವಾಗುತ್ತದೆ. ಗುಣಮುಖರಾಗದಿದ್ದಲ್ಲಿ 9449843213 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ವೈದ್ಯರ ತಂಡ ಬಂದು ತಪಾಸಣೆ ನಡೆಸಲಿದೆ. ಜ್ವರವಿದ್ದು, ಔಷಧ ತೆಗೆದುಕೊಳ್ಳುತ್ತಿರುವವರು ಗುಣ ಮುಖರಾದ ಬಳಿಕ ಲಸಿಕೆ ತೆಗೆದುಕೊಂಡರೆ ಉತ್ತಮ. ಡಿ. 25ರ ವರೆಗೆ ಈ ಲಸಿಕೆಯನ್ನು ನೀಡಲಾಗುತ್ತದೆ. ಬಳಿಕ ಬಂದವರು ಶುಲ್ಕ ಪಾವತಿಸಿ ಪಡೆಯಬಹುದು.

ಕೋಲಾರ ಜಿಲ್ಲೆಯಲ್ಲಿ ಮೆದುಳು ಜ್ವರ ಪತ್ತೆ: ಆತಂಕದಲ್ಲಿ ಜನತೆ..!

ಮಲ್ಪೆ: ಮ್ಯಾಂಡಸ್‌ ಚಂಡಮಾರುತ ಪ‌ರಿಣಾಮ: ದಡದತ್ತ ಧಾವಿಸಿದ ಬೋಟುಗಳು – Vishwanews24

Leave a Reply