ಮಣಿಪಾಲ : ಹಿರಿಯ ಪತ್ರಕರ್ತ ದಿ. ಬಿ.ಟಿ. ರಂಜನ್ ಅವರ ಪುತ್ರಿ ನಿಧನ – vishwanews24

Featured, ಉಡುಪಿ

ಮಣಿಪಾಲ : ಹಿರಿಯ ಪತ್ರಕರ್ತ ದಿ. ಬಿ.ಟಿ. ರಂಜನ್ ಅವರ ಪುತ್ರಿ ನಿಧನ

ಮಣಿಪಾಲ : ಖ್ಯಾತ ಹಿರಿಯ ಪತ್ರಕರ್ತ ದಿ. ಬಿ.ಟಿ. ರಂಜನ್ ಅವರ ಪುತ್ರಿ ಬಿ.ಟಿ.ಸೌಮ್ಯ ‌(29) ಅಸೌಖ್ಯದಿಂದ ಮೃತಪಟ್ಟಿದ್ದಾರೆ.

ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸೌಮ್ಯ ಅವರು ಪತ್ರಿಕೋದ್ಯಮದಲ್ಲಿ ಪದವೀಧರೆಯಾಗಿದ್ದರು. ಉಪ್ಪಿನಂಗಡಿ ‌ನಿವಾಸಿಯಾದ ಪತಿ ವೈಭವ್ ಅವರೊಂದಿಗೆ ಮಣಿಪಾಲದಲ್ಲಿ ವಾಸವಾಗಿದ್ದರು.

ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರಿಗೆ ತಪಾಸಣೆ ವೇಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದಕ್ಕಾಗಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.

Leave a Reply