ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೇರಿದರೆ ಭಾರತವು ‘ಹಿಂದೂ ಪಾಕಿಸ್ತಾನ’ವಾಗಲಿದೆ : ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರ್
ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಆಡಳಿತಕ್ಕೆ ಬಂದರೆ ಅವರು ಸಂಪೂರ್ಣ ಸಂವಿಧಾನವನ್ನೇ ಬದಲಾವಣೆ ಮಾಡುತ್ತಾರೆ ಮತ್ತು ಭಾರತವನ್ನು ಹಿಂದೂ ಪಾಕಿಸ್ತಾನವಾಗಿ ಪರಿವರ್ತನೆ ಮಾಡುತ್ತಾರೆಂದು ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ಅಧಿಕಾರ ಪುನರಾವರ್ತನೆಯಾದರೆ ನಮ್ಮ ಸಂವಿಧಾನವು ನಾವು ಅರ್ಥಮಾಡಿಕೊಂಡಂತೆ ಉಳಿಯುವುದಿಲ್ಲ. ಏಕೆಂದರೆ ಭಾರತದ ಸಂವಿಧಾನವನ್ನು ಮಾರ್ಪಡಿಸಬೇಕಾದ ಎಲ್ಲ ಅಂಶಗಳನ್ನು ಅವರು ಹೊಂದಿರುತ್ತಾರೆ ಮತ್ತು ಹೊಸದನ್ನು ಬರೆಯಲಿದ್ದಾರೆ ಎಂದು ಹೇಳಿದರು. ಕೇಸರಿ ಸರ್ಕಾರ ಬರೆಯಲಿರುವ ಹೊಸ ಸಂವಿಧಾನ ದೇಶವನ್ನು ಹಿಂದು ಪಾಕಿಸ್ತಾವನ್ನಾಗಿ ಬದಲಾಯಿಸಲಿದೆ ಎಂದು ಆರೋಪಿಸಿದ್ದಾರೆ.
