ಮಧ್ಯರಾತ್ರಿ ಧ್ವಜಾರೋಹಣಗೈದು ಸ್ವಾತಂತ್ರ್ಯ ದಿನ ಆಚರಿಸಿದ ಕರಾವಳಿಯ ಯುವಕರ ತಂಡ
ಮಧ್ಯರಾತ್ರಿ ಧ್ವಜಾರೋಹಣಗೈದು ಸ್ವಾತಂತ್ರ್ಯ ದಿನ ಆಚರಿಸಿದ ಕರಾವಳಿಯ ಯುವಕರ ತಂಡ
ಕಾಪು: 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಕರಾವಳಿ ಯುವಕರ ತಂಡ ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ನ ಸದಸ್ಯರು ಮಧ್ಯರಾತ್ರಿ ಧ್ವಜಾರೋಹಣ ಗೈಯುವ ಮೂಲಕ ವಿಶೇಷವಾಗಿ ಆಚರಿಸಿದರು.
ಸಂಸ್ಥೆಯ ಮುಂಬಯಿ ಸಂಚಾಲಕರಾದ ದಾಮೋಧರ ಪೂಜಾರಿ ಧ್ವಜಾರೋಹಣ ನೆರವೇರಿಸಿ ಮಾತಾಡಿ ಪ್ರತಿಯೊಬ್ಬರು ದೇಶಾಭಿಮಾನವನ್ನು ಮೈಗೂಡಿಸಿಕೊಂಡು ರಾಷ್ಟ್ರದ ಅಭಿವೃಧ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿ ದೇಶದ ಅಭಿವೃಧ್ಧಿಗೆ ಪ್ರಾಣತ್ಯಾಗ ಮಾಡಿದ ಮಹಾನ ನಾಯಕರನ್ನು ಸ್ಮರಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಗೌರವಧ್ಯಕ್ಷರಾದ ಅಶೋಕ್ ಪುತ್ರನ್
ಅಧ್ಯಕ್ಷ ಚಂದ್ರಕಾಂತ್ ಮೆಂಡನ್, ಉಪಾಧ್ಯಕ್ಷ ಪ್ರದೀಪ್ ಎಸ್ ಪುತ್ರನ್, ಕಾರ್ಯದರ್ಶಿ ಧೀರೇಶ್ ಡಿಪಿ,ಸದಸ್ಯರಾದ ಸುಕೇಶ್ ಡಿ ಮೂಳೂರು , ಪ್ರತೀಕ್,ನಾಗೇಶ್,ಸೇರಿದಂತೆ ನೂರಾರು ಸದಸ್ಯರು ,ರಾಷ್ಟ್ರ ಅಭಿಮಾನಿಗಳು ಉಪಸ್ಥಿತಿತರಿದ್ದರು.

