ಮುಕ್ಕ ಟೋಲ್ ರದ್ಧತಿ ಬಗ್ಗೆ ಉಡುಪಿ ಜೆಡಿಎಸ್ ಪ್ರತಿಕ್ರಿಯೆ – Vishwanews24

Featured, ಉಡುಪಿ

ಮುಕ್ಕ ಟೋಲ್ ರದ್ಧತಿ ಬಗ್ಗೆ ಉಡುಪಿ ಜೆಡಿಎಸ್ ಪ್ರತಿಕ್ರಿಯೆ

“ಅವಿಜ್ಞಾನಿಕವಾದ ಮಂಗಳೂರಿನ ಸುರತ್ಕಲ್ ಟೋಲ್ ಸಂಗ್ರಹ ರದ್ಧತಿಯನ್ನು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಯೋಗೀಶ್ ವಿ ಶೆಟ್ಟಿ ಅವರು ಸ್ವಾಗತಿಸಿರುತ್ತಾರೆ,ಇದು ಜನಸಾಮಾನ್ಯರ ಹೋರಾಟದ ಸಂದ ಫಲ.
ಅಂತೆಯೇ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಗೇಟ್ ಗಳಲ್ಲಿ  ಸ್ಥಳೀಯ  KA20 ಕಾರು ಮತ್ತಿತರ ವಾಹನಗಳಿಗೆ ವಿನಾಯತಿ ನೀಡಬೇಕು ಎಂದು ವಿನಂತಿಸಿರುತ್ತಾರೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎಲ್ಲಾ ಕಡೆ ಸರ್ವಿಸ್ ರಸ್ತೆ ಕಾಮಗಾರಿ ನಿರ್ಮಾಣ ಮಾಡಿ  ಅಪಘಾತಗಳು ಆಗದ ರೀತಿಯಲ್ಲಿ ಕಾಮಗಾರಿ ನಿರ್ವಹಿಸಬೇಕು. ಬಸ್ ಬೇ ಮತ್ತು ಲಾರಿ ಬೇ ನಿರ್ಮಾಣವಾಗಬೇಕು, ಬೀದಿ ದೀಪಗಳು ಕೆಟ್ಟು ಹೋಗಿದ್ದು ಕೆಲವು ಜಂಕ್ಷನ್ ಗಳಲ್ಲಿ ಕತ್ತಲು ಆವರಿಸಿದ್ದು, ರಾತ್ರಿ ಸಂಚರಿಸುವ ವಾಹನಗಳು ಅಪಘಾತಗಳಿಗೆ ಸಿಲುಕಿ ನೂರಾರು ಜನರು ಪ್ರಾಣ ಕಳೆದುಕೊಂಡಿರುತ್ತಾರೆ.
ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ಮತ್ತು ಕೆಲವು ಅಂಡರ್ ಪಾಸ್ ಗಳಲ್ಲಿ ದೀಪಗಳು ಉರಿಯದೆ ಇದೆ, ಮಾರ್ಕಿಂಗ್ ಗಳು ಕಾಣದೇ ಮತ್ತು ಗಾರ್ಡನ್ ನಿರ್ವಹಣೆಗಳು ಸರಿಯಾದ ರೀತಿಯಲ್ಲಿ ಆಗದೆ ಇದ್ದು, ಇದನ್ನೆಲ್ಲಾ ಸಮರ್ಪಕವಾಗಿ  ಕಾರ್ಯನಿರ್ವಹಿಸುವಂತೆ  ವ್ಯವಸ್ಥೆಗೊಳಿಸಬೇಕು.
 ಟೋಲ್ ವಿಲೀನದ ಪರಿಣಾಮ ದುಬಾರಿ ಸುಂಕ ನೀಡುವ ಪರಿಸ್ಥಿತಿ ಬರಬಾರದು  ಇದಕ್ಕೆ ಶೀಘ್ರ ಕ್ರಮ ಕೈಗೊಳ್ಳುವಂತೆ  ಕೇಂದ್ರ ಸರ್ಕಾರವನ್ನು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ   ಯೋಗೀಶ್ ವಿ ಶೆಟ್ಟಿ ಯವರು  ಒತ್ತಾಯಿಸಿರುತ್ತಾರೆ.”

Leave a Reply