ಮುಸ್ಲಿಮ್ ಗಾಯಕಿಯಿಂದ ಗೋಸ್ವರ್ಗಕ್ಕೆ ದೇಣಿಗೆ ಸಮರ್ಪಣೆ..!
ಸಾಗರ: ರಾಘವೇಶ್ವರ ಶ್ರೀಗಳ ಮುಂದಾಳತ್ವದಲ್ಲಿ ನಿರ್ಮಾಣವಾಗುತ್ತಿರುವ “ಗೋಸ್ವರ್ಗ”ಕ್ಕೆ ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್ ಇಂದು ದೇಣಿಗೆ ಸಮರ್ಪಣೆ ಮಾಡಿದ್ದಾರೆ. ಹೆಗ್ಗೋಡು ಸಮೀಪದ ಶ್ರೀತಿರುಮಲೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗೋಸಂರಕ್ಷಣೆಯ ಮಹತ್ವಾಕಾಂಕ್ಷೀ ಯೋಜನೆಗೆ ಸುಹಾನ ಸೈಯದ್ ದೇಣಿಗೆ ಸಮರ್ಪಣೆ ಮಾಡಿದ್ದಾರೆ.
ಸಭೆಯ ಆರಂಭದಲ್ಲಿ ಪ್ರಾರ್ಥನೆ ಮಾಡಿದ ಸುಹಾನ ಸೈಯದ್ ಅವರು “ಗೋಸ್ವರ್ಗ” ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಗೋಸ್ವರ್ಗ ಯೋಜನೆಗೆ ತಮ್ಮ ದೇಣಿಗೆಯನ್ನು ರಾಘವೇಶ್ವರ ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು. ಒಟ್ಟಿನಲ್ಲಿ ಜಾತಿ, ಧರ್ಮ ಎಲ್ಲವನ್ನ ಬಿಟ್ಟು “ಗೋಸ್ವರ್ಗ” ಕ್ಕೆ ಬೆಂಬ ವ್ಯಕ್ತವಾಗುತ್ತಿದ್ದು ವಿಶೇಷವೆ ಸರಿ.

