ಮೂರನೇ ಅಲೆಯನ್ನು ತಡೆಯಲು ದೇಶದಲ್ಲಿ ಲಸಿಕೆ ಉತ್ಪಾದನೆ ಮತ್ತು ಲಸಿಕೆ ನೀಡುವ ಅಭಿಯಾನದ ವೇಗವನ್ನು ಹೆಚ್ಚಿಸಿ : ರಾಕೇಶ್ ಬಿರ್ತಿ -Vishwanews24
ಮೂರನೇ ಅಲೆಯನ್ನು ತಡೆಯಲು ದೇಶದಲ್ಲಿ ಲಸಿಕೆ ಉತ್ಪಾದನೆ ಮತ್ತು ಲಸಿಕೆ ನೀಡುವ ಅಭಿಯಾನದ ವೇಗವನ್ನು ಹೆಚ್ಚಿಸಿ : ರಾಕೇಶ್ ಬಿರ್ತಿ -Vishwanews24
ಕೋವಿಡ್ ನ ಎರಡನೇ ಅಲೆಯ ತೀವೃತೆಯು ತಗ್ಗಿದ್ದು. ಅದರ ಬೆನ್ನಲ್ಲೇ ಕೋವಿಡ್ ರೂಪಾಂತರಗೊಂಡು ಡೆಲ್ಟಾ + ವೈರಸ್ ರೂಪದಲ್ಲಿ ಮೂರನೆ ಅಲೆಯಾಗಿ ನಮ್ಮ ದೇಶದಲ್ಲಿ ಬರಲಿದೆ ಎಂದು ಉನ್ನತ ಮಟ್ಟದ ತಜ್ಞರು ಈಗಾಗಲೇ ಸರಕಾರ ಮತ್ತು ಜನರನ್ನು ಎಚ್ಚರಿಸಿದ್ದಾರೆ..
ಕೋವಿಡ್ ನ ಮೂರನೇ ಅಲೆಯನ್ನು ತಡೆಯಲು ಏಕೈಕ ಮಾರ್ಗವೆಂದರೆ…ಎಲ್ಲರಿಗೂ ಲಸಿಕೆ ಹಾಕಿಸುವುದಾಗಿದೆ.
ಲಸಿಕೆಯ ಉತ್ಪಾದನೆ ಮತ್ತು ಲಸಿಕೆ ಅಭಿಯಾನವನ್ನು ಕೇಂದ್ರ ಸರ್ಕಾರವು ಈಗಾಗಲೇ ಪ್ರಾರಂಭಿಸಿದ್ದು ,ಅದರ ವೇಗವನ್ನು ಇನ್ನಷ್ಟು ತೀವೃ ಗತಿಯಲ್ಲಿ ನಡೆಸಬೇಕಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ತಯಾರಿಕಾ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಅಭಿವೃದ್ಧಿ ಹಂತದಲ್ಲಿ ಇರುವ ಕೆಲವು ಲಸಿಕೆಗಳನ್ನು ತುರ್ತು ಬಳಕೆಗೆ ಎದುರಾಗುವ ಕಾನೂನು ತೊಡಕುಗಳನ್ನು ನಿವಾರಿಸಿ ಕೊಡಬೇಕು.ಮತ್ತು ಮೂರನೇ ಅಲೆಯನ್ನು ಎದುರಿಸುವ ಸಿದ್ಧತೆಯನ್ನು ದೇಶದ ಆಸ್ಪತ್ರೆಗಳಲ್ಲಿ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಕೇಶ್ ಬಿರ್ತಿ ಅವರು ಆಗ್ರಹಿಸಿದ್ದಾರೆ.
