ಮೂಲಭೂತ ಸೌಕರ್ಯ ಕಾಲೋನಿ ಜನರ ಕಾಲ ಬುಡಕ್ಕೆ : ವಿನಯ್ ಕುಮಾರ್ ಸೊರಕೆ
ಕಾಪು: ಪ್ರತೀ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಬಹಳಷ್ಟು ಕೊರತೆ ಇದೆ. ಈ ಸೌಕರ್ಯವನ್ನು ಕಾಲ ಬುಡಕ್ಕೆ ತರುವ ಕೆಲಸವನ್ನು ಮಾಡುತ್ತೇನೆ ಅಂತಾ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿರಿ ನಗರ ಕಾಲೋನಿ ನಿವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕುರ್ಕಾಲು ಗ್ರಾ .ಪಂ ಅಧ್ಯಕ್ಷೆ ಶೋಭಾ ಸಾಲ್ಯಾನ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಶೆಟ್ಟಿ, ತಾ.ಪಂ. ಸದಸ್ಯ ರಾಜೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ದೇವಿ ಪುತ್ರನ್ ಕೋಟ್ಯಾನ್, ಮಹೇಶ್ ಶೆಟ್ಟಿ, ಲಕ್ಷ್ಮಣ, ಕೊರಗಪ್ಪ ಮೊದಲಾದವರು ಉಪಸ್ಥಿತರಿದ್ದರು.
ನತಾಲಿಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

