ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ  ಅಗತ್ಯವಿದ್ದಾಗ ಸಲಹೆ ನೀಡಲು ಆರ್‌ಎಸ್‌ಎಸ್‌ ಸಿದ್ಧ : ಮೋಹನ್ ಭಾಗವತ್ -Vishwanews24

Featured, ರಾಷ್ಟ್ರ ನ್ಯೂಸ್

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತೊಂದರೆಯಾದಗಲೆಲ್ಲಾ ರಚನಾತ್ಮಕ ಸಲಹೆ ನೀಡಲು ಆರ್‌ಎಸ್‌ಎಸ್‌ ಸಿದ್ಧ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ತೊಂದರೆಯಾದಗಲೆಲ್ಲಾ ರಚನಾತ್ಮಕ ಸಲಹೆ ನೀಡಲು ನಾವು ಸಿದ್ಧ ಎಂದಿದ್ದಾರೆ. ಅಧಿಕಾರ ದುರ್ಬಳಕೆಯಾಗದಂತೆ ತಡೆಯುವುದು ಪ್ರಜಾಪ್ರಭುತ್ವ ಸರ್ಕಾರದ ಕರ್ತವ್ಯ ಎಂದೂ ಎಚ್ಚರಿಸಿದ್ದಾರೆ.

ಪ್ರಜಾಪ್ರಭುತ್ವದ ಮೂಲಕ ಚುನಾಯಿತರಾದವರಿಗೆ ಸಾಕಷ್ಟು ಅಧಿಕಾರವಿದೆ. ಆದರೆ, ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದರ್ಥವಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಸಮಸ್ಯೆ ಒದಗಿದಾಗಲೆಲ್ಲಾ ಸಂಘ ಅಗತ್ಯ ಸಲಹೆ ನೀಡಲಿದೆ. ಧನಾತ್ಮಕ ದೃಷ್ಟಿಕೋನದಿಂದಲೇ ಈ ಕಾರ್ಯ ಮಾಡಲಿದೆ ಎಂದರು