ಮೋದಿ ಭಯದಿಂದ ಜೆಡಿಎಸ್ – ಕಾಂಗ್ರೇಸ್ ಅಪವಿತ್ರ ಮೈತ್ರಿ : ಶಾಸಕ ರಘುಪತಿ ಭಟ್

Featured, ಉಡುಪಿ

ಉಡುಪಿ : ನರೇಂದ್ರ ಮೋದಿ ನಾಯಕತ್ವದ ಬಿಜೆಪಿಗೆ ಹೆದರಿ ಜೆಡಿಎಸ್ – ಕಾಂಗ್ರೇಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಇದೇ ಭಯದಿಂದ ರಾಷ್ಟ್ರದ ವಿಪಕ್ಷ ನಾಯಕರ ಸಹಿತ ಹಲವು ಮಂದಿ ನಾಯಕರು ಕುಮಾರಸ್ವಾಮಿಯವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಕಾಂಗ್ರೇಸ್ – ಜೆಡಿಎಸ್ ಸರಕಾರ ರಚನೆ ವಿರುದ್ಧ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿ ಎದುರು ನಡೆದ ಕರಾಳ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೇಸ್ ಈಗ ಹೀನಾಯ ಸ್ಥಿತಿಗೆ ತಲುಪಿದೆ. ಮೈತ್ರಿಯಲ್ಲಿಯೂ ಕಾಂಗ್ರೇಸ್ ಜೆಡಿಎಸ್ ನ ಅಂತರದ ಸ್ಥಾನ. ಈ ಸರಕಾರ ೩ ತಿಂಗಳೋ , ೬ ತಿಂಗಳೋ ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ. ಯಾವ ಹೊತ್ತಿನಲ್ಲಾದರೂ ರಾಷ್ಟ್ರಪತಿ ಆಡಳಿತ ಬರಬಹುದಾಗಿದೆ. ಎಂದು ಹೇಳಿದರು.