ಮೋದಿ ಹಾಗೂ ಅಮಿತ್ ಶಾ ಬಗ್ಗೆ ಭಯ ಬೇಡ ; ವಿಶ್ವದಲ್ಲೆ ಅತೀ ಎತ್ತರದ ಶಿವಾಜಿ ಪ್ರತಿಮೆ ನಿರ್ಮಿಸಿ: ಶಿವಸೇನೆ

Featured, ರಾಷ್ಟ್ರ ನ್ಯೂಸ್

ಮುಂಬೈ: ಮುಂಬಯಿ ಕರಾವಳಿಯಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಎತ್ತರವಾದ ಶಿವಾಜಿ ವಿಗ್ರಹವನ್ನು ನಿರ್ಮಿಸಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಮುಂದಾಗಬೇಕು ಎಂದು ಶಿವಸೇನಾ ಆಗ್ರಹಿಸಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರ ಅಧ್ಯಕ್ಷ  ಅಮಿತ್ ಶಾ ಅವರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದೂ ಹೇಳಿದೆ.

‘ಗುಜರಾತ್‌ನಲ್ಲಿ ನಿರ್ಮಿಸಿರುವ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ ‘ಏಕತಾ ಪ್ರತಿಮೆ’ ಜಗತ್ತಿನಲ್ಲೆ ಅತೀ ಎತ್ತರದ ಪ್ರತಿಮೆಯಾಗಿರಬೇಕೆಂಬ ಕಾರಣಕ್ಕೆ ಶಿವಾಜಿ ಪ್ರತಿಮೆಯ ಎತ್ತರವನ್ನು ಕಡಿಮೆಗೊಳಿಸಲಾಗಿದೆ ಎಂದು ಎನ್‌ಸಿಪಿ ಮುಖಂಡ ಜಯಂತ್‌ ಪಾಟೀಲ್ ಆರೋಪಿಸಿದ್ದಾರೆ’ , ಗುಜರಾತ್ ನಲ್ಲಿ  ವಲ್ಲಭ ಬಾಯಿ ಅವರ ಏಕತಾ ಪ್ರತಿಮೆ ಪ್ರಪಂಚದಲ್ಲೆ ಅತಿ ದೊಡ್ಡದಾಗಿದ್ದು ಅದಕ್ಕಿಂತ ದೊಡ್ಡ ಶಿವಾಜಿ ಪ್ರತಿಮೆ ನಿರ್ಮಿಸಿದರೇ ಮೇದಿ ಆಶಯಕ್ಕೆ ಭಂಗ ಬರಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಯೋಚನೆ ಮಾಡುತ್ತಿದ್ದಾರೆ, ಎಂದೂ ಶಿವಸೇನಾ ಹೇಳಿದೆ.

ಹೀಗಾಗಿ ಮೋದಿ ಅವರಿಗೆ ಹೆದರದೆ ಅತಿ ಎತ್ತರದ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಧೈರ್ಯ. ತೋರಬೇಕು ಎಂದು ಶಿವಸೇನೆ ಫಡ್ನವೀಸ್ ಗೆ ತಮ್ನ ಮುಖವಾಣಿ ಸಾಮ್ನಾದಲ್ಲಿ ತಿಳಿಸಿದ್ದಾರೆ.