ಯತ್ನಾಳ್ ಅವರ ಬಾಯಿ ಮುಚ್ಚಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ : ರಮೇಶ್ ಜಾರಕಿಹೊಳಿ – vishwanews24
ಯತ್ನಾಳ್ ಅವರ ಬಾಯಿ ಮುಚ್ಚಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ : ರಮೇಶ್ ಜಾರಕಿಹೊಳಿ
ಬೆಳಗಾವಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗಲೂ ನಮ್ಮ ತಂಡದಲ್ಲಿಯೇ ಇದ್ದಾರೆ. ಅವರ ಬಾಯಿ ಮುಚ್ಚಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯತ್ನಾಳ್ ಮಾತಿನ ಭರದಲ್ಲಿ ಏನೇನೂ ಮಾತನಾಡುತ್ತಾರೆ. ಅವರ ಮಾತಿನಲ್ಲಿ ಯಾವುದೇ ದ್ವೇಷ ಹಾಗೂ ಕೆಟ್ಟ ಭಾವನೆ ಇಲ್ಲ. ಮಾತನಾಡುವುದು ಅವರ ಹುಟ್ಟು ಗುಣ. ಯಾರನ್ನೂ ಬೈಯದಂತೆ, ಪಕ್ಷಕ್ಕೆ ಮುಜುಗುರ ಆಗುವ ರೀತಿ ಮಾತನಾಡದಂತೆ ಮನವಿ ಮಾಡಿದ್ದೇವೆ. ಹುಬ್ಬಳ್ಳಿಯಲ್ಲಿ ಯತ್ನಾಳ್ ಮಾತನಾಡಿದ್ದು ತಪ್ಪಿದೆ. ಅದರ ಅರ್ಥ ಬೇರೆ ಇದೆ, ತಪ್ಪು ಕಲ್ಪನೆ ಬೇಡ ಎಂದರು.
ಯತ್ನಾಳ್ ಬೇರೆ ಪಕ್ಷ ಕಟ್ಟುವುದಿಲ್ಲ. ಅವರು ಬಿಜೆಪಿ ನಾಯಕರನ್ನು ಬೈಯುತ್ತಿಲ್ಲ, ಒಂದೇ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಸಂಘಟನೆ ಮಾಡಿ ಮುಂದೆ ಸಾಗುವಂತೆ ಹೇಳಿದ್ದೇವೆ. ತಂದೆ ಹಾಗೂ ಮಗನ ಬಗ್ಗೆಯೂ ಮಾತನಾಡಬೇಡ ಎಂದು ಹೇಳಿದ್ದೇನೆ. ಸಂಘಟನೆ ಮಾಡುವುದನ್ನು ಬಿಟ್ಟು ಬೇರೆ ವಿಚಾರ ಮಾತನಾಡ ಬೇಡ ಎಂದು ಮನವಿ ಮಾಡಿದ್ದೇನೆ ಎಂದರು.
