ಯಾರಿಂದಲೂ ಜೆಡಿಎಸ್‌ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ : ಹೆಚ್‌‌.ಡಿ.ದೇವೇಗೌಡ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು,: “ಬಿಜೆಪಿಯ ಜೊತೆ ಜೆಡಿಎಸ್‌ ವಿಲೀನದ ಚರ್ಚೆ ಬಾಲಿಶ. ಯಾರಿಂದಲೂ ಜೆಡಿಎಸ್‌ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ” ಎಂದು ಜೆಡಿಎಸ್‌‌‌ ವರಿಷ್ಠ ಹೆಚ್‌‌.ಡಿ.ದೇವೇಗೌಡ ಹೇಳಿದರು.”

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜಕಾರಣದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಉತ್ತಮವಲ್ಲ” ಎಂದರು.

“ಬಿಜೆಪಿ ಹಾಗೂ ಜೆಡಿಎಸ್‌ ವಿಲೀನ ವಿಚಾರದ ಬಗ್ಗೆ ಜ.7ರಂದು ಹೆಚ್‌.ಡಿ.ಕುಮಾರಸ್ವಾಮಿ ಅರಮನೆ ಮೈದಾನದಲ್ಲಿ ನಡೆಯಲಿರುವ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ತಿಳಿಸಲಿದ್ದಾರೆ” ಎಂದು ಹೇಳಿದರು.

ಸಿದ್ದರಾಮಯ್ಯ ಅವರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ದೇವೇಗೌಡ, “ಕಾಂಗ್ರೆಸ್‌ ಪಕ್ಷ ಏನು ಎಂದು ತಿಳಿದಿದೆ. ಸಭಾಪತಿ ವಿಚಾರದ ಬಗ್ಗೆ ನಾಯಕತ್ವದ ಪ್ರಶ್ನಿಸುವ ನಾಟಕವಾಡುತ್ತಿದ್ದಾರೆ” ಎಂದು ತಿಳಿಸಿದರು.