ಯುವಕಾಂಗ್ರೇಸ್ ಸಮಿತಿ ಉಡುಪಿ ಜಿಲ್ಲಾ ಮಟ್ಟದ “ಯುವ ಭಾರತ್ ಸಾಂಸ್ಕೃತಿಕ ಸ್ಪರ್ಧೆ-ಪತ್ರಿಕಾಗೋಷ್ಠಿ vishwanews24
ಯುವಕಾಂಗ್ರೇಸ್ ಸಮಿತಿ ಉಡುಪಿ ಜಿಲ್ಲಾ ಮಟ್ಟದ “ಯುವ ಭಾರತ್ ಸಾಂಸ್ಕೃತಿಕ ಸ್ಪರ್ಧೆ-ಪತ್ರಿಕಾಗೋಷ್ಠಿ
ಉಡುಪಿ : ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 76 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ “ಯುವ ಭಾರತ್ ಸಾಂಸ್ಕೃತಿಕ ಸ್ಪರ್ಧೆ- 2023” ಕಾರ್ಯಕ್ರಮವನ್ನು ಆ.15 ರಂದು ಬೆಳಿಗ್ಗೆ 9.30 ಕ್ಕೆ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮೂಹ ಸಂಗೀತ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆ, ಪ್ರಹಸನ ಸ್ಪರ್ಧೆ ನಡೆಯಲಿದೆ. ಪ್ರತೀ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ನಗದು ಬಹುಮಾನ ನೀಡಲಾಗುತ್ತಿದ್ದು, ಬ್ಲಾಕ್ ಮಟ್ಟದ ಚಾಂಪಿಯನ್ ತಂಡ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುರಯ್ಯ ಅಂಜುಮ್,ಮಹಮ್ಮದ್ ನಿಯಾಜ್,ಶಬರೀಶ್ ಸುವರ್ಣ, ಪ್ರೀತಿ ಜೆ ಸಾಲ್ಯಾನ್ ರವಿರಾಜ್ ಉಪಸ್ಥಿತರಿದ್ದರು.

