ರಷ್ಯಾ-ಉಕ್ರೇನ್ ಯುದ್ಧ : ಬಿಕ್ಕಟ್ಟು ಬಗೆಹರಿಸಲು ಭಾರತ ಮಧ್ಯ ಪ್ರವೇಶಿಸಬೇಕು ,  ಪುಟಿನ್ ಜೊತೆ ಮೋದಿ ಮಾತನಾಡಬೇಕು : ಉಕ್ರೇನ್ ಮನವಿ – Vishwanews24

Featured, ರಾಷ್ಟ್ರ ನ್ಯೂಸ್

ಮೋದಿ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಾಗಿದ್ದು, ಮೋದಿ ಹೇಳಿದರೆ ಪುಟೀನ್‌ ಕೇಳುತ್ತಾರೆ : ಉಕ್ರೇನ್ ರಾಯಭಾರಿ 

ನವದೆಹಲಿ : ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಬಗೆಹರಿಸಲು ಭಾರತ ಮಧ್ಯ ಪ್ರವೇಶಿಸಬೇಕು ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸುವಂತೆ ಉಕ್ರೇನ್ ಮನವಿ ಮಾಡಿದೆ. ಮೋದಿ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಾಗಿದ್ದು, ಮೋದಿ ಹೇಳಿದರೆ ಪುಟೀನ್‌ ಕೇಳುತ್ತಾರೆ ಎಂದು ಉಕ್ರೇನ್ ರಾಯಭಾರಿ ಪೊಲಿಖಾ ಹೇಳಿದ್ದಾರೆ.

ಭಾರತದಲ್ಲಿನ ಉಕ್ರೇನ್ ರಾಯಭಾರಿ ಪೊಲಿಖಾ, ‘ಉಕ್ರೇನ್‌ನಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ವಿಶ್ವಕ್ಕೆ ಶಾಂತಿ ತರುವ ಸಾಮರ್ಥ್ಯ ಭಾರತಕ್ಕಿದೆ ಎಂದರು. ಹಾಗಾಗಿ ಭಾರತ ಮಧ್ಯಪ್ರವೇಶಿಸಬೇಕು. ಇನ್ನು ಉಕ್ರೇನ್‌ನಲ್ಲಿ 20,000 ಭಾರತೀಯ ವಿದ್ಯಾರ್ಥಿಗಳಿದ್ದು, ಅವರಲ್ಲಿ ಕೆಲವರು ಯುದ್ಧದಿಂದಾಗಿ ಸಿಲುಕಿಕೊಂಡಿದ್ದಾರೆ ಎಂದು ಪೋಲಿಖಾ ಹೇಳಿದರು.

Leave a Reply