ಲಾಕ್ ಡೌನ್ ಸಂಕಷ್ಟಕ್ಕಿಡಾದ ಕುಟುಂಬದ ಮೊಗದಲ್ಲಿ ನಗು ತರಿಸಿದ ಕೆ.ಉದಯ್ ಕುಮಾರ್ ಶೆಟ್ಟಿ,ಇದುವರೆಗೆ 13 ಲಕ್ಷ ರೂಪಾಯಿ ವೆಚ್ಚದಲ್ಲಿ ಕಿಟ್ ವಿತರಣೆ; vishwanews24
ಲಾಕ್ ಡೌನ್ ಸಂಕಷ್ಟಕ್ಕಿಡಾದ ಕುಟುಂಬದ ಮೊಗದಲ್ಲಿ ನಗು ತರಿಸಿದ ಕೆ.ಉದಯ್ ಕುಮಾರ್ ಶೆಟ್ಟಿ,ಇದುವರೆಗೆ13 ಲಕ್ಷ ರೂಪಾಯಿ ವೆಚ್ಚದಲ್ಲಿ ಕಿಟ್ ವಿತರಣೆ
ಉಡುಪಿ: ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಶ್ರೀ ಕೆ ಉದಯಕುಮಾರ್ ಶೆಟ್ಟಿಯವರು ಇದುವರೆಗೆ ಸುಮಾರು 13 ಲಕ್ಷ ರೂಪಾಯಿ ವೆಚ್ಚದಲ್ಲಿ ಲಾಕ್-ಡೌನ್ ನಿಂದ ಸಂಕಷ್ಟಿಡಾಗಿರುವ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ.
ಲಾಕ್-ಡೌನ್ ಘೋಷಣೆಯಾದ ದಿನದಿಂದ ದಿನಸಿ ಸಾಮಾಗ್ರಿ, ಮೆಡಿಸಿನ್, ಊಟದ ವ್ಯವಸ್ಥೆಯನ್ನು ಜಿಲ್ಲೆಯಾದ್ಯಂತ ಬಡ ಹಾಗೂ ಮಧ್ಯಮ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ಈ ಬಗ್ಗೆ ಮಾತಾಡಿದ ಅವರು” ಜನಸಾಮಾನ್ಯರು ನಮ್ಮಲ್ಲಿ ಬಂದು ತಮ್ಮ ಕಷ್ಟವನ್ನು ಹೇಳುವಂತಾಗಬಾರದು ನಾವು ಜನರಲ್ಲಿಗೆ ಹೋಗಿ ಸಂಕಷ್ಟಗಳಿಗೆ ಪರಿಹಾರ ನೀಡಬೇಕು, ಅದು ಯಾವುದೇ ರೀತಿಯ ಸಹಾಯ ಆಗಬಹುದು. ಸಂಕಷ್ಟದ ಸಮಯದಲ್ಲಿ ಜನರ ಮುಖದಲ್ಲಿ ಗೆಲುವನ್ನು ಕಾಣುವಂತಾಗಬೇಕು. ಆಗ ಜನ ನಮ್ಮನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಮಾತ್ರವಲ್ಲದೆ ಪ್ರಸ್ತುತ ಎಲ್ಲಾ ಕಾರ್ಯ ಕೂಡ ಉಳ್ಳವರು ಮಾಡಲೇ ಬೇಕಾದ ಕರ್ತವ್ಯಎಂದರು”
