ಲೋಕಸಭಾ ಚುನಾವಣೆ : ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಅಭಿಮಾನಿಗಳಿಂದ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಉರುಳು ಸೇವೆ – Vishwanews24

Featured, ದಕ್ಷಿಣ ಕನ್ನಡ

ಸುಬ್ರಹ್ಮಣ್ಯ: ಭಾರತದ ಅತೀ ದೊಡ್ಡ ಪ್ರಜಾಪ್ರಭುತ್ವ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಬೇಕು ಎಂದು ಬಿಜೆಪಿ ಕೊಡಗು – ಸೋಮವಾರಪೇಟೆ ಭಾಗದ ಮೋದಿ ಅಭಿಮಾನಿಗಳು ನಾಗರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಸೋಮವಾರ ಬೆಳಗ್ಗೆ ಉರುಳು ಸೇವೆ ನಡೆಸಿದರು.

ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಮಹಾರುದ್ರಯಾಗ ನಡೆಸಲಾಗಿತ್ತು. ಮೋದಿಯವರ ನಕ್ಷತ್ರ, ಹೆಸರಿನಲ್ಲಿ ಸಂಕಲ್ಪ ಮಾಡಿ ಪೂರ್ಣಾಹುತಿ ನೀಡಲಾಗಿತ್ತು. ಈಗ, ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಕೊಡಗು – ಸೋಮವಾರಪೇಟೆ ಭಾಗದ ಮೋದಿ ಅಭಿಮಾನಿಗಳು ನಾಗರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಉರುಳು ಸೇವೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಬೇಕು ಎಂದು ಆರಂಭದಲ್ಲಿ ಶ್ರೀ ದೇವರ ದರ್ಶನ ಪಡೆದ ಇವರು ಕೊಡಗಿನ ರವಿ ರೈ ಎಂಬವರ ಮುಂದಾಳತ್ವದಲ್ಲಿ ಕುಮಾರ, ರಾಮು, ಮಣಿ, ಕಿರ್ತು, ಸುಧಾ, ಇಶಾ, ಜಯರಾಮ್‌, ಕುಮಾರ, ರಮೇಶ್‌, ಗಗನ, ಭಾಸ್ಕರ, ನಂದ, ಮೋಹನ, ಸತೀಶ್‌, ಮಂಜು, ಸತೀಶ್‌ ಎನ್‌, ಚೇತನ್‌, ಕೃಷ್ಣ ಶಿವಣ್ಣ, ಮಂಜ ಸಹಿತ 16 ಮಂದಿ ಉರುಳು ಸೇವೆ ನಡೆಸಿದ್ದಾರೆ.