ವಕೀಲ ವೃತ್ತಿ ಮುಂದುವರಿಸಲಿರುವ ವೀರಪ್ಪ ಮೊಯ್ಲಿ -Vishwanews24
ಬೆಂಗಳೂರು : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು ವಕೀಲ ವೃತ್ತಿ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ”ನಾನು ಮೂಲತಃ ವಕೀಲ. ರಾಜಕಾರಣದಲ್ಲಿ ಸಕ್ರಿಯನಾಗಿದ್ದ ಕಾರಣ ತಾತ್ಕಾಲಿಕವಾಗಿ ವಕೀಲ ವೃತ್ತಿಯಿಂದ ದೂರ ಉಳಿಯಬೇಕಾಯಿತು. 2004ರಲ್ಲಿ ಪ್ರಕರಣವೊಂದರ ಸಂಬಂಧ ಹೈಕೋರ್ಟ್ಗೆ ಹಾಜರಾಗಿದ್ದೆ. ಇನ್ನು ಮುಂದೆ ವಕೀಲ ವೃತ್ತಿಯನ್ನು ಮುಂದುವರಿಸುತ್ತೇನೆ. ಹೈಕೋರ್ಟ್ಗೆ ನಿರಂತರವಾಗಿ ಬರುತ್ತೇನೆ” ಎಂದು ಹೇಳಿದರು.
ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ, ಹಿರಿಯ ವಕೀಲ ಡಿಎಲ್ಎನ್ ರಾವ್, ವಕೀಲರಾದ ರವೀಂದ್ರನಾಥ್ ಕಾಮತ್ ಹಾಗೂ ಕಲ್ಯಾಣ ಬಸವರಾಜ್ ಅವರೊಂದಿಗೆ ಕೆಲಕಾಲ ಅವರು ಚರ್ಚೆ ನಡೆಸಿದರು.
