ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಅರಳಿದ ಕಮಲ; ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು – Vishwanews24

Featured, ರಾಜ್ಯ ನ್ಯೂಸ್

ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಅರಳಿದ ಕಮಲ; ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು – Vishwanews24

ಮಡಿಕೇರಿ: ಕರ್ನಾಟಕ ವಿಧಾನ ಪರಿಷತ್‌‌ ಚುನಾವಣೆಯ ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು 105 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕೊಡಗು ವಿಧಾನ ಪರಿಷತ್‌‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್‌‌‌‌ ಗೌಡ ಸೋಲು ಕಂಡಿದ್ದಾರೆ.

ಮಂಥರ್‌ ಗೌಡ ಅವರು ಬಿಜೆಪಿ ನಾಯಕ ಎ ಮಂಜು ಅವರ ಪುತ್ರನಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ವಿಧಾನ ಪರಿಷತ್‌ ಚುನಾವಣೆಯ ಮತ ಎಣಿಕೆಯು ಡಿ. 14ರಂದು ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆದಿದ್ದು, ಒಟ್ಟು ಚಲಾವಣೆಯಾದ ಮತಗಳು ಒಟ್ಟು 1325. ಇದರಲ್ಲಿ ಬಿಜೆಪಿ‌ – 705 ಮತಗಳೊಂದಿಗೆ ಗೆದ್ದು ವಿಜಯದ ನಗೆ ಬೀರಿದರೆ, ಕಾಂಗ್ರೆಸ್ – 603ಮತಗಳೊಂದಿಗೆ ಪರಾಭವಗೊಂಡಿದೆ. ಒಟ್ಟು 17 ಮತಗಳು ತಿರಸ್ಕೃತಗೊಂಡಿದ್ದು ಬಿಜೆಪಿ 102 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ಕೊರೊನಾ : ಹೊಸವರ್ಷಕ್ಕೆ ತಮಿಳುನಾಡಿನ ಬೀಚ್‍ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ – Vishwanews24