ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಕಾಪು ತಾಲೂಕು: ಹರಿವರಾಸನಂ ಶತಮಾನೋತ್ಸವ ಆಚರಣೆ : ಸಭಾ ಕಾರ್ಯಕ್ರಮ-ನೃತ್ಯ-ಬಹುಮಾನ ವಿತರಣೆ : vishwanews24
ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಕಾಪು ತಾಲೂಕು: ಹರಿವರಾಸನಂ ಶತಮಾನೋತ್ಸವ ಆಚರಣೆ..
ಸಭಾ ಕಾರ್ಯಕ್ರಮ-ನೃತ್ಯ-ಬಹುಮಾನ ವಿತರಣೆ
ಕಾಪು: ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಕಾಪು ತಾಲ್ಲೂಕು ವಲಯದ ವತಿಯಿಂದ ಹರಿವರಾಸನಂ ಶತಮಾನೋತ್ಸವ ಕಾರ್ಯಕ್ರಮ ದಿನಾಂಕ 01 ಜನವರಿ 2023 ರಂದು ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಾಸ್ ಕಾಪು ತಾಲೂಕು ಪ್ರಧಾನಕಾರ್ಯದರ್ಶಿ ದಿವಾಕರ ಶೆಟ್ಟಿ ತಿಳಿಸಿದರು.
ಶ್ರೀ ಹರಿಹರಾತ್ಮಜ ಅಷ್ಟಕಂ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಸಾಸ್ ವತಿಯಿಂದ ಮನೆಮನೆಯಲ್ಲೂ ಅಯ್ಯಪ್ಪ ಧ್ಯಾನ-ನಾಮಸಂಕೀರ್ತನ-ವರ್ಷಪೂರ್ತಿ ನಡೆಸುವ ಯೋಜನೆಯು ನಡೆಯಲಿದೆ ಎಂದು ಅವರು ತಿಳಿಸಿದರು.

ಜನವರಿ 1 ರಂದು ನಡೆಯುವ ಸಭಾ ಕಾರ್ಯಕ್ರಮವನ್ನು ಮಹಾಕಾಳಿ ಮಂತ್ರದೇವತೆ ಸನ್ನಿಧಿಯ ಧರ್ಮದರ್ಶಿ ಸುಧರ್ಮ ಶ್ರೀಯಾನ್ ದೀಪ ಪ್ರಜ್ವಲನೆ ಮಾಡಲಿದ್ದು ,ಸಾಸ್ ಕಾಪು ವಲಯದ ಅಧ್ಯಕ್ಷ ರಘುರಾಮ ಶೆಟ್ಟಿ ಕೊಪ್ಪಲಂಗಡಿ ಇವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು ಪತ್ರಕರ್ತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಹರಿವರಾಸನಂ ಉಪನ್ಯಾಸ ಮಾಡಲಿದ್ದು ಸಮಾಜದ ಗೌರವಾನ್ವಿತರು ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ ಎಂದರು.
ಜನವರಿ 1 ರಂದು ಬೆಳಿಗ್ಗೆ 11.30 ರಿಂದ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ಕಾಪು ವತಿಯಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಹರಿವರಾಸನಂ ನೃತ್ಯ ,ಸಭಾ ಕಾರ್ಯಕ್ರಮದಲ್ಲಿ ವಿವಿಧ ಶಿಬಿರದ ಒಟ್ಟು ಐದು ಗುರುಸ್ವಾಮಿಗಳಿಗೆ ಗೌರವಸನ್ಮಾನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ,ಕೊಪ್ಪಲಂಗಡಿ ರಘುರಾಮ್ ಎಮ್ ಶೆಟ್ಟಿ, ನಾರಾಯಣ ಗುರುಸ್ವಾಮಿ ಉಪಸ್ಥಿತರಿದ್ದರು.
