ಶಿರ್ವ: ಬಚ್ಚಲು ಮನೆ ಸಹಿತ ಅಡುಗೆ ಕೋಣೆಗೆ ತಗುಲಿದ ಬೆಂಕಿ : ಅಪಾರ ಹಾನಿ – Vishwanews24

Featured, ಉಡುಪಿ

ಶಿರ್ವ: ಬಚ್ಚಲು ಮನೆ ಸಹಿತ ಅಡುಗೆ ಕೋಣೆಗೆ ತಗುಲಿದ ಬೆಂಕಿ : ಅಪಾರ ಹಾನಿ

ಶಿರ್ವ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಪಂಜಿಮಾರು ಕೋಡುಗುಡ್ಡೆ ನಿವಾಸಿ ಲೀನಾ ಕುಟಿನ್ಹೊ ಅವರ ಬಚ್ಚಲು ಮನೆ ಸಹಿತ ಅಡುಗೆ ಕೋಣೆಗೆ ಮಂಗಳವಾರ ಸಂಜೆ ಬೆಂಕಿ ತಗಲಿ ಅಪಾರ ಹಾನಿ ಸಂಭವಿಸಿದೆ.

ಬಚ್ಚಲು ಮನೆಯಲ್ಲಿ ಹಾಕಿದ್ದ ಬೆಂಕಿ ಅಡುಗೆ ಕೋಣೆಗೂ ವ್ಯಾಪಿಸಿದ್ದು ಸಂಪೂರ್ಣ ಸುಟ್ಟುಹೋಗಿದೆ. ಬಚ್ಚಲು ಮನೆಯಯಲ್ಲಿದ್ದ ತೆಂಗಿನಕಾಯಿ, ಕಟ್ಟಿಗೆ ಮತ್ತಿತರ ಸಾಮಾನು ಸರಂಜಾಮು ಸುಟ್ಟು ಕರಕಲಾಗಿದೆ. ಅಡುಗೆ ಕೋಣೆಯಿಂದ ಮನೆಗೂ ಹಬ್ಬಿದ ಬೆಂಕಿಯ ಕೆನ್ನಾಲಗೆಯಿಂದ ಭಾಗಶ ಮನೆಗೂ ಹಾನಿ ಸಂಭವಿಸಿದೆ.

ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿಗಳು,ಉಡುಪಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಮುಂಬೈ: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಬಂಧನ – Vishwanews24

Leave a Reply