ಶಿರ್ವ : ಮಸೀದಿ ಬಳಿಯ ಗುಂಡಿಯನ್ನು ಮುಚ್ಚಿ ಯುವಕರಿಂದ ಸಮಾಜಸೇವೆ – vishwanews24
ಶಿರ್ವ : ಮಸೀದಿ ಬಳಿಯ ಗುಂಡಿಯನ್ನು ಸ್ವಯಂಪ್ರೇರಿತರಾಗಿ ಮುಚ್ಚಿ ಯುವಕರಿಂದ ಸಮಾಜಸೇವೆ
ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಡಾನ್ ಬಾಸ್ಕೋ– ಶಿರ್ವ ಮಸೀದಿ ಸಮೀಪ, ಶಿರ್ವ ದಿಂದ ಉಡುಪಿ ಕಡೆಗೆ ಸಾಗುವ ರಸ್ತೆಯಲ್ಲಿದ್ದ ವಾಹನ ಚಾಲಕರಿಗೆ ಅಪಾಯಕಾರಿಯಾಗಿದ್ದ ಗುಂಡಿಯನ್ನು ಸ್ಥಳೀಯರು ಸ್ವಯಂಪ್ರೇರಿತರಾಗಿ ಮುಚ್ಚಿ ಸಮಾಜಸೇವೆಗೆ ಮಾದರಿಯಾಗಿದ್ದಾರೆ.

ಈ ಕಾರ್ಯದಿಂದ ವಾಹನ ಸವಾರರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಿದ್ದು, ಸ್ಥಳೀಯ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
