ಶೋಭಾ ಕರಂದ್ಲಾಜೆಯ ಸೆಲ್ಫಿಗೆ ಬೆಲೆ ಕಟ್ಟುವ ಮುನ್ನಾ ಮಿಥುನ್ ರೈ ತನ್ನ ಯೋಗ್ಯತೆ ಅರಿತುಕೊಳ್ಳಲಿ: ವೀಣಾ ಶೆಟ್ಟಿಯಿಂದ ಶೋಭಾ ಪರ ಬ್ಯಾಟಿಂಗ್
ಶೋಭಾ ಕರಂದ್ಲಾಜೆಯ ಸೆಲ್ಫಿಗೆ ಬೆಲೆ ಕಟ್ಟುವ ಮುನ್ನಾ ಮಿಥುನ್ ರೈ ತನ್ನ ಯೋಗ್ಯತೆ ಅರಿತುಕೊಳ್ಳಲಿ: ವೀಣಾ ಶೆಟ್ಟಿಯಿಂದ ಶೋಭಾ ಪರ ಬ್ಯಾಟಿಂಗ್
ಉಡುಪಿ: ಕಳೆದೆರಡು ದಿನಗಳ ಹಿಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯೊಂದರಲ್ಲಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಕಾಣುತ್ತಿಲ್ಲ ಅವರ ಜತೆಗೆ ನಿಂತು ಸೆಲ್ಫಿಗೆ ತೆಗೆದು ಕಳುಹಿಸಿದ ಸಾರ್ವಜನಿಕವಾಗಿ ರೂಪಾಯಿ500 ಬಹುಮಾನ ಘೋಷಿಸಿರುವ ವಿಚಾರವಾಗಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಕೆಂಡಮಂಡಳವಾಗಿ ಅಕ್ರೋಶ ಹೊರಹಾಕಿದ್ದಾರೆ.

ಇದೇ ವಿಚಾರವಾಗಿ ಉಡುಪಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಪ್ರತಿಕ್ರಿಯಿಸಿ ” ಮಿಥುನ್ ರೈ ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನ ಕಲಿಯಬೇಕು ,ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಇವರ ಸಚಿವರು ಎಲ್ಲಿ ಇದ್ದರೂ ಹೇಗೆ ಇದ್ದರು ಎಂಬುದೇನೂ ಗುಟ್ಟಾಗಿ ಉಳಿದಿಲ್ಲ ಸಚಿವೆ ಶೋಭಾ ಕರಂದ್ಲಾಜೆಯ ಕಾರ್ಯವೈಖರಿಯ ಬಗ್ಗೆ ಚೂರು ನೋಡಿ ತಿಳಿದುಕೊಳ್ಳಲಿ ಮತ್ತು ಆಕೆಯ ಬಗ್ಗೆ ಮಾತಾಡುವ ಮುನ್ನ ತನ್ನ ಯೋಗ್ಯತೆಯನ್ನು ಅರಿತು ಕೊಂಡು ಬಾಲಿಶ ಹೇಳಿಕೆ ನೀಡಲಿ ಎಂದರು.

ಕಾಂಗ್ರೆಸ್ ಅಧಿಕಾರಿವಿಲ್ಲದೆ ಮತಿಭ್ರಮನೆಗೊಂಡಿದೆ ಮತ್ತು ದಕ ದಲ್ಲಿ ಮಿಥುನ್ ರೈ ತನ್ನ ಅಸ್ತಿತ್ವ ಕಳೆದುಕೊಂಡಿರುವ ಕಾರಣದಿಂದಾಗಿ ಈ ರೀತಿಯ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಮುಂದಿನ ದಿನಗಳಲ್ಲಿ ಇದೇ ರೀತಿ ಮಾತನಾಡಿದಲ್ಲಿ ಮಹಿಳಾಮೋರ್ಚ ತಕ್ಕ ಶಾಸ್ತಿಮಾಡಲಿದೆ ಎಂದು ಅವರು ತಿಳಿಸಿದರು.

ಮಿಥುನ್ ರೈ ಹೇಳಿಕೆಯ ಬಗ್ಗೆ ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಮುಖಂಡರು ಕಿಡಿಕಾರಿದ್ದರು.

