ಶ್ರೀ ರಾಮಸೇನೆ ಸದಾ ಜಿಲ್ಲೆಯ ಮುಗ್ಧ, ಸಾಮಾನ್ಯ ಜನರ ಪರವಾಗಿ ಧ್ವನಿಗೂಡಿಸುತ್ತದೆ : ಜಯರಾಂ ಅಂಬೆಕಲ್ಲು – Vishwanews24
ಶ್ರೀ ರಾಮಸೇನೆ ಸದಾ ಜಿಲ್ಲೆಯ ಮುಗ್ಧ, ಸಾಮಾನ್ಯ ಜನರ ಪರವಾಗಿ ಧ್ವನಿಗೂಡಿಸುತ್ತದೆ : ಜಯರಾಂ ಅಂಬೆಕಲ್ಲು – Vishwanews24
ಉಡುಪಿ: ಮುಗ್ಧಜನರನ್ನು ವಂಚಿಸುವಂತೆ ತೋರುತ್ತಿರುವ ಕೊರೊನಾ ಮಹಾಮಾರಿ ಕಾರ್ಯಾಚರಣೆ ಜನರಿಗೆ ಉಪಕಾರಿಯಾಗಿರದೆ, ಜನರನ್ನು ಭಯಭೀತರನ್ನಾಗಿಸುವ ಸಂಶಯಾಸ್ಪದ ಬೆಳವಣಿಗೆ ನಡೆಯುತ್ತಿರುವುದು ಖಂಡನೀಯ, ಆಕ್ಷೇಪಾರ್ಹ ಎಂದು ಶ್ರೀರಾಮ ಸೇನೆ ತಿಳಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಸರಕಾರದ ನಿರ್ಧಾರಗಳು ಮತ್ತು ಸೇವೆಗಳು ಜನಹಿತಕ್ಕಾಗಿ ಇರಬೇಕು. ಅದು ಬಿಟ್ಟು ಜನರನ್ನು ಭಯಭೀತರನ್ನಾಗಿಸಿ, ಮೂರ್ಖರನ್ನಾಗಿಸುವುದಕ್ಕೆ ಅಲ್ಲ.
ಈ ಬಗ್ಗೆ ಉಡುಪಿ ಜಿಲ್ಲೆಯ ಶ್ರೀ ರಾಮಸೇನೆ ಸದಾ ಮುಗ್ಧ, ಸಾಮಾನ್ಯ ಜನರ ಪರವಾಗಿ ಧ್ವನಿಗೂಡಿಸುತ್ತದೆ. ಕೊರೊನಾ ಹೆಸರಿನಲ್ಲಿ ನಡೆಯುವ ವಂಚನೆ ಮತ್ತು ಆಡಳಿತ ವೈಫಲ್ಯವನ್ನು ಉಡುಪಿ ಜಿಲ್ಲೆಯ ಶ್ರೀ ರಾಮಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು ಮತ್ತು ಜಿಲ್ಲಾ ಗೌರವಾಧ್ಯಕ್ಷಾದ ಡಿ.ರಾಧಾಕೃಷ್ಣ ಶೆಟ್ಟಿ ಜಂಟಿಯಾಗಿ ತಿಳಿಸಿದ್ದಾರೆ.
