ಶ್ರೀನಗರದಲ್ಲಿ ಕಾಶ್ಮೀರ ಧ್ವಜದ ಜೊತೆಗೆ ಹಾರಾಡುತ್ತಿರುವ ಭಾರತದ ತ್ರಿವರ್ಣ ಧ್ವಜ -Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಶ್ರೀನಗರ:ಕಣಿವೆ ರಾಜ್ಯದ ರಾಜಧಾನಿ ಶ್ರೀನಗರದಲ್ಲಿರುವ ನಾಗರಿಕ ಸಚಿವಾಲಯದ ಕಟ್ಟಡದ ಮೇಲೆ ಜಮ್ಮು ಮತ್ತು ಕಾಶ್ಮೀರದ ಧ್ವಜದ ಜತೆಯಲ್ಲಿಯೇ ತ್ರಿವರ್ಣ ಧ್ವಜ ಹಾರಾಡುತ್ತಿರುವುದು ವಿಶೇಷವಾಗಿದೆ.

ಸಂವಿಧಾನದ ಆರ್ಟಿಕಲ್​ 370ರ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಆರ್ಟಿಕಲ್​ 35(ಎ) ಪ್ರಕಾರ ಜಮ್ಮು ಕಾಶ್ಮೀರದ ಜನತೆ ಹೊರತುಪಡಿಸಿ ಹೊರಗಿನವರು ಕಾಶ್ಮೀರದಲ್ಲಿ ಆಸ್ತಿ ಖರೀದಿ ಮತ್ತು ಸ್ಥಿರ ಆಸ್ತಿಯನ್ನು ಹೊಂದಿ ಶಾಶ್ವತವಾಗಿ ನೆಲೆಸುವ ಆಗಿಲ್ಲ ಎಂಬ ವಿಶೇಷ ಅಧಿಕಾರವನ್ನು ಕೇಂದ್ರ ಸರ್ಕಾರ ಕಳೆದ ಸೋಮವಾರ ರದ್ದು ಮಾಡಿದೆ. ಅಲ್ಲದೆ, ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸುವ ಮಹತ್ವದ ಬಿಲ್​ ಅನ್ನು ಸೋಮವಾರ ರಾಜ್ಯಸಭೆಯಲ್ಲಿ ಪಾಸ್​ ಮಾಡಲಾಯಿತು.

ಸಂವಿಧಾನದಲ್ಲಿ ಆರ್ಟಿಕಲ್​ 370 ಮತ್ತು 35(ಎ)ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಮಾಜಿ ಉಪಮುಖ್ಯಮಂತ್ರಿ ನಿರ್ಮಲ್​ ಸಿಂಗ್​ ಅವರು ತಮ್ಮ ಕಾರಿನ ಮೇಲಿದ್ದ ಜಮ್ಮ ಮತ್ತು ಕಾಶ್ಮೀರದ ಧ್ವಜವನ್ನು ಮಂಗಳವಾರ ತೆಗೆದು ಹಾಕಿದ್ದಾರೆ.

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರದ ವಿಧಿಯನ್ನು ರದ್ದುಗೊಳಿಸಿರುವ ಬಿಲ್​ ಸಂಸತ್ತಿನಲ್ಲಿ ಪಾಸ್​ ಆಗಿದೆ. ಇದರಿಂದ ನೆಮ್ಮದಿ ದೊರಕಿದೆ. ಕೊನೆಗೂ ನಮ್ಮ ಹೊರೆಯನ್ನು ತೆಗೆದು ಹೊರಗಡೆ ಎಸೆದಿದ್ದೇವೆ ಎಂದು ಹೇಳಿದರು.