ಸತ್ಯಾಗ್ರಹವು ದೌರ್ಜನ್ಯ, ಅನ್ಯಾಯ ಕೊನೆಗೊಳಿಸುತ್ತದೆ : ರಾಹುಲ್ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ಭಾರತ್‌ ಬಂದ್‌‘ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬೆಂಬಲ..

ಸತ್ಯಾಗ್ರಹವು ದೌರ್ಜನ್ಯ, ಅನ್ಯಾಯ ಕೊನೆಗೊಳಿಸುತ್ತದೆ: ರಾಹುಲ್ ಗಾಂಧಿ -Vishwanews24

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಸತ್ಯಾಗ್ರಹವೇ ದೌರ್ಜನ್ಯ, ಅನ್ಯಾಯ, ದಬ್ಬಾಳಿಕೆಯನ್ನು ಕೊನೆಗೊಳಿಸುತ್ತದೆ ಎನ್ನುವುದಕ್ಕೆ ಭಾರತದ ಇತಿಹಾಸ ಸಾಕ್ಷಿಯಾಗಿದೆ” ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಸತ್ಯಾಗ್ರಹದಿಂದ ದೌರ್ಜನ್ಯ, ಅನ್ಯಾಯ, ಹಾಗೂ ದುರಹಂಕಾರ ನಾಶವಾಗುತ್ತದೆ ಎನ್ನುವುದಕ್ಕೆ ಭಾರತದ ಇತಿಹಾಸ ಸಾಕ್ಷಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿರುವ ಶೇ.30ರಷ್ಟು ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ತಾನಗಳು ಸೃಷ್ಟಿಯಾಗುತ್ತದೆ : ಟಿಎಂಸಿ ನಾಯಕ ಶೇಖ್ ಅಲಾಮ್ -Vishwanews24

“ರೈತರು ನಡೆಸುತ್ತಿರುವ ಈ ಆಂದೋಲನ ದೇಶದ ಹಿತದೃಷ್ಟಿಗೆ ಧಕ್ಕೆ ತರದಂತೆ ಹಾಗೂ ಶಾಂತಿಯುತವಾಗಿ ನಡೆಯಲಿ” ಎಂದು ಹೇಳುವ ಮೂಲಕ ಕೇಂದ್ರ ಕೃಷಿ ಕಾಯ್ದೆಗಳ ವಿರುದ್ದ ರೈತರು ಕರೆ ನೀಡಿರುವ ಭಾರತ್‌ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ : ಸಚಿವ ಸ್ಥಾನದಿಂದ ಸುಧಾಕರ್ ಅವರನ್ನ ವಜಾಗೊಳಿಸಿ : ಕಾಂಗ್ರೆಸ್ ಮಹಿಳಾ ನಾಯಕಿಯರ ಆಗ್ರಹ -Vishwanews24