ಸಮಾಜ ಸೇವಾ ವೇದಿಕೆ ಕಳತ್ತೂರು ಕಾಪು ಮತ್ತು ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮ.vishwanews24

Featured, ಉಡುಪಿ

ಸಮಾಜ ಸೇವಾ ವೇದಿಕೆ ಕಳತ್ತೂರು ಕಾಪು ಮತ್ತು ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮ.

ಕಾಪು: ಸಮಾಜ ಸೇವಾ ವೇದಿಕೆ ಕಳತ್ತೂರು ಕಾಪು,ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಇದರ ಅಧೀನದಲ್ಲಿರುವ  ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅನಾರೋಗ್ಯ ಪೀಡಿತರಿಗೆ ಪ್ರತಿ ತಿಂಗಳ ಉಚಿತ ಮೆಡಿಸಿನ್ ಧನಸಹಾಯ, ಆರೋಗ್ಯ ಮಾಹಿತಿ ಕಾರ್ಯಕ್ರಮ, ಆರೋಗ್ಯ ಮಾಹಿತಿ ಪುಸ್ತಕ ಬಿಡುಗಡೆ ಮತ್ತು ಸಮಾಜ ಸೇವಕರಿಗರ ಸನ್ಮಾನ ,ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರಮ ಕಳತ್ತೂರು ಕುಶಲ ಶೇಖರ ಶೆಟ್ಟಿ ಆಡಿಟೋರಿಯಂನಲ್ಲಿ ಆದಿತ್ಯವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ  ನೆರವೇರಿಸಿ ಶುಭಹಾರೈಸಿದರು.ಗುರ್ಮೆ ಸುರೇಶ್ ಶೆಟ್ಟಿ ” ದಯಾನಂದ ಕೆ ಶೆಟ್ಟಿ ದೆಂದೂರುಕಟ್ಟೆ ರವರ “ಸ್ಪಿರುಲಿನಾ ಪೋಷಕಾಂಶಗಳ ರಾಣಿ” ಪುಸ್ತಕ ಬಿಡುಗಡೆಗೊಳಿಸಿದರು.
ಇದೇ ಸಂಧರ್ಭದಲ್ಲಿ ಸಮಾಜ ಸೇವಾ ವೇದಿಕೆ ವತಿಯಿಂದ ಉಡುಪಿ‌ಮಲಬಾರ್ ಗೊಲ್ಡ್ ಮತ್ತು ಡೈಮಂಡ್ಸ್ ಇದರ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್, ಮಾರ್ಕೆಟಿಂಗ್ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಇವರಿಗೆ “ಸೇವಾರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿಸ್ವಾರ್ಥ ಸೇವೆಗಾಗಿ ಗೋಪಾಲಕೃಷ್ಣ ಭಟ್, ಗ್ಲಾಡಿಸ್ ಅಲ್ಮೇಡಾ,ಅಶೋಕ್ ಶೇರಿಗಾರ್,ಸುಧಾವತಿ,ನಯನ ಪ್ರಭಾವತಿ ಗೌರವ ಸನ್ಮಾನ ನಡೆಯಿತು.

,ಕಾಪು ಲೀಲಾಧರ ಶೆಟ್ಟಿ,ಬಳಕೆದಾರರ ವೇದಿಕೆ ಪರ್ಕಳದ ಅಜೀವ ಗೌರವ ಅಧ್ಯಕ್ಷ ಹಾಜಿ ಕೆ ಅಬೂಬಕ್ಕರ್,ಅನಿವಾಸಿ ಭಾರತೀಯ ಉದ್ಯಮಿ ಶೇಖರ ಬಿ ಶೆಟ್ಟಿ ಅಬುದಾಬಿ,ಉದ್ಯಮಿ ವಿಲ್ಸನ್ ಕುಂದರ್,ಬೆಹರಿನ್ ಉದ್ಯಮಿ ಶ್ರೀಮತಿ ಜೆಸಿಂತ ಬರ್ಬೋಜ ಕಳತ್ತೂರು,ಸಮಾಜ ಸೇವಾ ವೇದಿಕೆ ಕಳತ್ತೂರು ಕಾಪು ಇದರ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ,ಗೌರವ ಅಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು,ಸಂಚಾಲಕ ದಿವಾಕರ ಡಿ ಶೆಟ್ಟಿ, ಉಪಾಧ್ಯಕ್ಷ ರಾಜೇಶ್ ಕುಲಾಲ್,ದಯಾನಂದ ಕೆ ಶೆಟ್ಟಿ,ಉಪಸ್ಥಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್
9343846360

ಇದೇ ಸಂಧರ್ಭದಲ್ಲಿ ಸಮಾಜ ಸೇವಾ ವೇದಿಕೆ ವತಿಯಿಂದ ಉಡುಪಿ‌ಮಲಬಾರ್ ಗೊಲ್ಡ್ ಮತ್ತು ಡೈಮಂಡ್ಸ್ ಇದರ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್, ಮಾರ್ಕೆಟಿಂಗ್ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಇವರಿಗೆ “ಸೇವಾರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಯಿತು.