ಸಮಾಜದ ನೆಮ್ಮದಿಗಾಗಿ RSS​ ಮತ್ತು ಭಜರಂಗ ದಳ ನಿಷೇಧಿಸಿ : ಜಮೀರ್​​ ಅಹ್ಮದ್ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಸೋಷಿಯಲ್​​​ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ ಮುನ್ನ ಆರ್​​ಎಸ್​​ಎಸ್​​​ ಮತ್ತು ಭಜರಂಗ ದಳ ನಿಷೇಧಿಸಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾಜಿ ಸಚಿವ ಜಮೀರ್​​ ಅಹ್ಮದ್​​​ ಆಗ್ರಹಿಸಿದ್ದಾರೆ.

ಇಂದು ಪುಲಿಕೇಶಿನಗರದ ಫುಟ್ಬಾಲ್ ಮೈದಾನವೊಂದರಲ್ಲಿ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿರೋಧದ ಸಮಾವೇಶದಲ್ಲಿ ಜಮೀರ್​​ ಅಹ್ಮದ್​​ ಭಾಗಿಯಾಗಿದ್ದರು. ಇಲ್ಲಿನ ವೇದಿಕೆ ಮೇಲೆ ಸಮಾವೇಶವನ್ನುದ್ದೇಶಿಸಿ ಮಾತಾಡಿದ ಜಮೀರ್​​ ಬಿಜೆಪಿ ಸರ್ಕಾರಕ್ಕೆ ಎಸ್​​ಡಿಪಿಐಗೆ ಮುನ್ನ ಆರ್​ಎಸ್​ಎಸ್​ ಮತ್ತು ಭಜರಂಗ ದಳ ನಿಷೇಧಿಸಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಎಸ್​​ಡಿಪಿಐ ನಿಷೇಧಿಸಲು ಮುಂದಾಗಿದೆ. ಆರ್​ಎಸ್​ಎಸ್​ ಮತ್ತು ಭಜರಂಗ ದಳ ಬಹಿರಂಗವಾಗಿಯೇ ಕೋಮುದ್ವೇಷ ಬಿತ್ತರಿಸುವ ಹೇಳಿಕೆ ನೀಡುತ್ತಾರೆ. ಇಲ್ಲಿಯವರೆಗೂ ಎಸ್​​ಡಿಪಿಐ ಇಂತಹ ಹೇಳಿಕೆ ನೀಡಿಲ್ಲ. ಎಸ್​​ಡಿಪಿಐ ನೀಡಿರುವ ಒಂದೇ ಒಂದು ಕೋಮುವಾದಿ ಹೇಳಿಕೆಯಾದರೂ ಬಿಜೆಪಿ ತೋರಿಸಲಿ ಎಂದು ಮಾಜಿ ಸಚಿವ ಜಮೀರ್​​​ ಅಹ್ಮದ್​​ ಕಿಡಿಕಾರಿದರು.

ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕಬೇಕು. ಈ ಬದಲಾವಣೆ ಎಸ್​​ಡಿಪಿಐ ನಿಷೇಧದಿಂದ ಸಾಧ್ಯವಿಲ್ಲ. ಸಮಾಜದ ನೆಮ್ಮದಿಗಾಗಿ ಮೊದಲು ಆರ್​ಎಸ್​ಎಸ್​ ಮತ್ತು ಭಜರಂಗ ದಳ ನಿಷೇಧಿಸುವಂತೆ ಮನವಿ ಮಾಡುತ್ತೇನೆ ಎಂದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292