ಸಿಂಹ ರಾಶಿಯವರೇ ನೀವು ನಂಬಿದ ದೇವರು ನಿಮ್ಮ ಕೈ ಬಿಡುವುದಿಲ್ಲ: ನೋಡಿ ಇಂದಿನ ರಾಶಿ ಭವಿಷ್ಯ -ಶ್ರೀ ಗಣಪತಿ ಭಟ್ 8088827292 -Vishwanews24

Featured, ರಾಜ್ಯ ನ್ಯೂಸ್

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮೇಷ:- ರಾಜಕಾರಣಿಗಳಿಗೆ ಸಾರ್ವಜನಿಕರ ಎದುರು ಮುಖಭಂಗ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಮಾತೇ ಬೆಳ್ಳಿ ಮೌನವೇ ಬಂಗಾರ ಎಂಬಂತೆ ಮೌನದಿಂದಿರುವುದು ಒಳ್ಳೆಯದು. ವಿಷ್ಣುವಿನ ಆರಾಧನೆ ಮಾಡಿ. ಸಾಧ್ಯವಾದರೆ ಹೆಸರುಕಾಳನ್ನು ದಾನ ಮಾಡಿ.

ವೃಷಭ:- ಸಮಾಧಾನ ಇರಲಿ. ಮನೆಯಲ್ಲಿ ಶಾಂತಿ ಕದಡದ ಹಾಗೆ ನಿಗಾ ವಹಿಸಿ. ನಿಮ್ಮ ಅಂತಃಶಕ್ತಿಯು ಅಪಾರವಾಗಿದೆ. ಅದನ್ನು ಎದುರಾಳಿಗಳ ಮುಂದೆ ವೃಥಾ ಮಾತನಾಡಿ ವ್ಯರ್ಥ ಮಾಡಿಕೊಳ್ಳದಿರಿ. ಕಣ್ಣಿಗೆ ಸಂಬಂಧಪಟ್ಟ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಮಿಥುನ:- ಸಂಬಂಧಿಗಳನ್ನು ನೀವು ದೂರ ಇರಿಸಿದಷ್ಟು ಹತ್ತಿರಕ್ಕೆ ಬರುತ್ತಾರೆ. ಅವರನ್ನು ಜಾಣ್ಮೆಯಿಂದ ಹೊರಹಾಕುವುದು ಒಳ್ಳೆಯದು. ಬೇಡದ ಚಿಂತನೆಗಳಿಂದ ಶಿರೋವೇದನೆ ಕಾಡುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ಕಟಕ:- ಕೌಟುಂಬಿಕ ವ್ಯಾಜ್ಯಗಳಲ್ಲಿ ಹಣ್ಣಾಗಿದ್ದೀರಿ. ಹೀಗಾಗಿ ಕೆಲವು ಹೊಂದಾಣಿಕೆಗಳಿಗೆ ತೊಡಗಲು ಸಕಾಲವಾಗಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಉತ್ತಮ ಅವಕಾಶವನ್ನು ಕಳೆದುಕೊಳ್ಳದಿರಿ.

ಸಿಂಹ:- ಹತ್ತಿರದವರಿಂದ ನೋವು ಎದುರಿಸುವ ಸಂದರ್ಭ ಒದಗಿ ಬರುವ ಸಾಧ್ಯತೆ ಇದೆ. ಆದರೆ ನೀವು ನಂಬಿದ ದೇವರು ನಿಮ್ಮ ಕೈ ಬಿಡುವುದಿಲ್ಲ. ಆತ್ಮವಿಶ್ವಾಸದಿಂದ ಎದುರಾಗುವ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.

ಕನ್ಯಾ:- ನಿಮ್ಮ ಜ್ಞಾನದ ಶಿಖರ ಬಹು ಎತ್ತರದ್ದು. ಆದರೆ ಸ್ವಸಾಮರ್ಥ್ಯದಿಂದ ಮುಂದುವರಿಯಿರಿ. ನೀವು ಪಡೆದ ಜ್ಞಾನವನ್ನು ಪರರಿಗೆ ಹಂಚುವ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳುವಿರಿ. ಅಂತೆಯೇ ಹೆಚ್ಚಿನ ಜನರ ಗೌರವಕ್ಕೂ ಪಾತ್ರರಾಗುವಿರಿ.

ತುಲಾ:- ಭ್ರಮೆಯ ಕಾರಣದಿಂದ ಹಗ್ಗವೊಂದು ಹಾವಿನಂತೆ ಕಾಣುವ ಸಂದರ್ಭವಿದೆ. ಸಣ್ಣಪುಟ್ಟ ಸಾಲವನ್ನು ಕೊಟ್ಟವರು ನನ್ನನ್ನು ಕಾಡುವರು ಎಂಬ ಭ್ರಮೆ ನಿಮ್ಮನ್ನು ಕಾಡುವುದು. ಅವರಿಗೆ ನಿಜ ಸಂಗತಿಯನ್ನು ಹೇಳಿ ಕೆಲವು ದಿನ ಕಾಲಾವಕಾಶವನ್ನು ಕೇಳಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ವೃಶ್ಚಿಕ:- ವಿದೇಶ ಪ್ರಯಾಣವನ್ನು ಊಹಿಸಿರದ ನಿಮಗೆ ಆಶ್ಚರ್ಯವನ್ನುಂಟು ಮಾಡುವ ಸುದ್ದಿಯೊಂದು ಕೇಳಿಸುವುದು. ಉನ್ನತ ವ್ಯಾಸಂಗಕ್ಕಾಗಲಿ ಅಥವಾ ನೌಕರಿ ವಿಷಯಕ್ಕಾಗಲಿ ನಿಮಗೆ ವಿದೇಶಿ ಕರೆಯೊಂದು ಬರುವ ಸಾಧ್ಯತೆ ಇದೆ.

ಧನುಸ್ಸು:- ಈಚಲು ಮರದ ಕೆಳಗೆ ಮಜ್ಜಿಗೆ ಕುಡಿಯುವ ಸಾಹಸ ಬೇಡ. ನಿಮ್ಮ ವಿರೋಧಿಗಳು ನಿಮ್ಮ ಪ್ರತಿಯೊಂದು ಚಟುವಟಿಕೆಗಳನ್ನು ಹದ್ದಿನ ಕಣ್ಣಿನ ರೀತಿಯಲ್ಲಿ ಗಮನಿಸುತ್ತಿರುವರು. ಹಾಗಾಗಿ ನೀವು ಎಚ್ಚರದಿಂದ ಇರುವುದು ಒಳ್ಳೆಯದು.

ಮಕರ:- ಕಪ್ಪು ವಸ್ತುಗಳ ಮಾರಾಟದಿಂದ ಅಧಿಕ ಲಾಭವುಂಟಾಗುವುದು. ಸಮಯಕ್ಕೆ ಸರಿಯಾಗಿ ಊಟ ಮಾಡದೆ ಅಸಿಡಿಟಿ ತೊಂದರೆಯಿಂದ ಬಳಲಬೇಕಾಗುವುದು. ಹಾಗಾಗಿ ಸೂಕ್ತ ಸಮಯದಲ್ಲಿಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಕುಂಭ:- ಅನೇಕ ರೀತಿಯ ಪ್ರಶಂಸೆಗಳು ಕಾಣಿಕೆಗಳನ್ನು ಪಡೆಯುವ ಅಪರೂಪದ ಸಾಧನೆ ನಿಮ್ಮಿಂದ ಘಟಿಸುವುದು. ಸಾಮಾಜಿಕವಾಗಿ ಎಲ್ಲರಿಂದ ಗುರುತಿಸಿಕೊಳ್ಳುವಿರಿ. ಬಹುದಿನದ ಕನಸು ನನಸಾಗುವುದು.

ಮೀನ:- ಪ್ರಯಾಣದಲ್ಲಿ ಎಚ್ಚರವಿರಲಿ. ಮಾತೃ ಸಂಬಂಧದವರ ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಂಭವ ಇದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೆಲವರಿಗೆ ಇರುವ ಮನೆ ಬದಲಿಸಬೇಕಾದ ಸಂದರ್ಭ ಬರುವುದು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292