ಸಿದ್ದರಾಮಯ್ಯ ಶಾಸಕಾಂಗದ ನಾಯಕತ್ವದಲ್ಲಿ ಇರುವಾಗ ಅಮಿತ್ ಶಾ ಅಂತವರು ನೂರು ಜನ ಬಂದರೂ ಸರ್ಕಾರಕ್ಕೆ ಏನೂ ಮಾಡಲು ಆಗಲ್ಲ : ಆರ್ ಬಿ ತಿಮ್ಮಾಪೂರ್ -Vishwanews24
ಬೆಳಗಾವಿ : ಬಿಜೆಪಿಯವರು ನಾಲ್ಕು ಜನ ಶಾಸಕರನ್ನು ಇಟ್ಟುಕೊಂಡು ಮೀಟಿಂಗ್ ಮಾಡಿದ್ದೆ ಮಾಡಿದ್ದು, ಆದರೆ ನಾಲ್ಕು ಜನರು ನಮ್ಮ ಕಡೆ ಇದ್ದಾರೆ, ಸುಮ್ಮನೆ ಬಿಜೆಪಿಯವರನ್ನು ಜನ ಆಟ ಆಡಿಸುತ್ತಿದ್ದಾರೆ.ಇದು ಬಿಜೆಪಿಯವರಿಗೆ ಅರ್ಥ ಆಗುತ್ತಿಲ್ಲ ಎಂದು ಸಚಿವ ಆರ್ ಬಿ ತಿಮ್ಮಾಪೂರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಮೈತ್ರಿ ಸರ್ಕಾರ ಪತನವಾಗಲಿದೆ ಎನ್ನುವ ಭವಿಷ್ಯಗಳನ್ನು ಕೇಳಿದ್ದೇನೆ. ಈ ರೀತಿಯ ಭವಿಷ್ಯದ ಮೇಲೆ ನಮಗೆ ನಂಬಿಕೆ ಹೋಗಿದೆ. ನಮ್ಮ ಶಾಸಕರು ನಮ್ಮ ಜೊತೆಯಲ್ಲೇ ಇದ್ದಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗದ ನಾಯಕತ್ವದಲ್ಲಿ ಇರುವಾಗ ಅಮಿತ್ ಶಾ ಅಂತವರು ನೂರು ಜನ ಬಂದರೂ ಸರ್ಕಾರಕ್ಕೆ ಏನೂ ಮಾಡಲು ಆಗಲ್ಲ, ನೂರಕ್ಕೆ ನೂರಷ್ಟು ಸರ್ಕಾರ ಸುಭದ್ರವಾಗಿರಲಿದೆ.
ರಾಹುಲ್ ಗಾಂಧಿ, ದೇವೇಗೌಡರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆದುಕೊಂಡು ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
