ಸುಶಾಂತ್ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ : ಇದು ಮಾನವೀಯತೆ ಗೆಲುವು : ನಟಿ ಕಂಗನಾ -Vishwanews24
ಮುಂಬೈ: ಸುಪ್ರೀಂಕೋರ್ಟ್ ಸುಶಾಂತ್ ಸಿಂಗ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ್ದು, ಬಾಲಿವುಡ್ ಕ್ವೀನ್, ನಟಿ ಕಂಗನಾ ರಣಾವತ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮಾನವೀಯತೆ ಗೆಲುವು ಇದಾಗಿದ್ದು, ಸುಶಾಂತ್ ಸಿಂಗ್ ಯೋಧರಿಗೆ ಧನ್ಯವಾದಗಳು. ಮೊದಲ ಬಾರಿಗೆ ಒಗ್ಗಟ್ಟಿನ ಶಕ್ತಿಯ ಗೆಲುವಿನ ಅನುಭವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಕಂಗನಾ ರಣಾವತ್,ಬಾಲಿವುಡ್ ನಲ್ಲಿಯ ಸ್ವಜನಪಕ್ಷಪಾತದಿಂದಾಗಿ ಸುಶಾಂತ್ ನಮ್ಮೊಂದಿಗೆ ಇಲ್ಲ. ಸುಶಾಂತ್ ಪ್ರಕರಣದ ಬಗ್ಗೆ ನಾನು ಪ್ರಶ್ನಿಸಿದಾಗ ನನ್ನ ಧ್ವನಿ ಅಡಗಿಸುವ ಎಲ್ಲ ಪ್ರಯತ್ನಗಳು ನಡೆದವು ಎಂದು ಹೇಳಿದರು.
ಕೆಲವರು ನನ್ನ ಸಿನಿಮಾಗಳಿಂದ ದೂರವಿಡಲು ಪ್ರಯತ್ನಗಳು ನಡೆದಿವೆ. ಕೆಲ ಪಕ್ಷಗಳು ನನ್ನನ್ನು ರಾಜಕೀಯಕ್ಕೆ ಆಹ್ವಾನಿಸುವ ಮೂಲಕ ಸುಶಾಂತ್ ಪ್ರಕರಣದಿಂದ ಹಿಂದೆ ಸರಿಯುವಂತೆ ಆಮಿಷ ಒಡ್ಡಿವೆ. ಆದ್ರೆ ದೇಶದ ಜನತೆ ಸುಶಾಂತ್ ಗೆ ನ್ಯಾಯ ಸಿಗಬೇಕೆಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಬಾಲುವುಡ್ ನಲ್ಲಿಯ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದಾಗ ಸುಶಾಂತ್ ನನಗೆ ಸಾಥ್ ನೀಡಿದ್ದರು. ನನ್ನ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಯ್ತು. ತನ್ನ ಬೆಳವಣಿಗೆಗೆ ಸ್ವಜನಪಕ್ಷಪಾತ ಅಡ್ಡಿಯಾಗಿದೆ ಎಂದು ಸುಶಾಂತ್ ಹೇಳಿಕೊಂಡಿದ್ದರು. ಅಂದಿನಿಂದ ಸುಶಾಂತ್ ಸಿನಿಮಾಗಳಿಂದ ವಂಚಿತರಾದರು ಎಂದು ತಿಳಿಸಿದರು.
