ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇ.ಡಿ ನೋಟಿಸ್ : ಬೆಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ – ಯು.ಟಿ ಖಾದರ್ ಆಕ್ರೋಶ

Featured, ರಾಜ್ಯ ನ್ಯೂಸ್

ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ಜೊತೆಗಿದ್ದಾರೆ..

ಗಾಂಧಿ ಕುಟುಂಬ ಈ‌ ದೇಶಕ್ಕೆ ತ್ಯಾಗ ಸೇವೆ ಮಾಡಿದೆ..

ಡಬಲ್ ಇಂಜಿನ್ ಸರ್ಕಾರ ಆಡಳಿತ ಮಾಡುವಲ್ಲಿ ವಿಫಲ..

ಬೆಂಗಳೂರು: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇ.ಡಿ ನೋಟಿಸ್ ಕೊಡಿಸುವ ಮೂಲಕ ಬೆಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಇ.ಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಅಧಿಕಾರ ದುರುಪಯೋಗ ಮಾಡಿಕೊಂಡು ದ್ವೇಷದ ರಾಜಕೀಯ ಮಾಡುತ್ತಿದೆ ಬಿಜೆಪಿ. ಯಾವುದೇ ವಿಷಯ ಇಲ್ಲದಿದ್ದರೂ ತನಿಖೆಗೆ ಕರೆಯುತ್ತಿದೆ. ದ್ವೇಷದ ರಾಜಕೀಯ ಜನ ಸಹಿಸಲ್ಲ, ಸೋನಿಯಾ ರಾಹುಲ್ ಕ್ಲೀನ್ ಚಿಟ್ ಪಡೆದುಕೊಂಡು ಬರುತ್ತಾರೆ ಎಂದರು. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ಜೊತೆಗಿದ್ದಾರೆ ಎಂದರು.‌

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಸತ್ಯಕ್ಕೆ ಜಯ ಸಿಗುತ್ತದೆ. ಗಾಂಧಿ ಕುಟುಂಬ ಈ‌ ದೇಶಕ್ಕೆ ತ್ಯಾಗ ಸೇವೆ ಮಾಡಿದೆ. ‌ಹಾಗಿದ್ದರೂ‌ ಈ ಪರಿವಾರಕ್ಕೆ ಕಿರುಕುಳ ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ರೋಸಿ ಹೊಗಿದ್ದಾರೆ ಎಂದು ಕಿಡಿಕಾರಿದರು.

ಯಾವುದೇ ನಯ ಪೈಸೆ ಗಾಂಧಿ ಕುಟುಂಬಕ್ಕೆ ಹೋಗಿಲ್ಲ.ಆದರೂ ಜನರಿಗೆ ಮೋಸ ಮಾಡುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಪತ್ರಿಕೆ ಉಳಿಸಲು‌ ನಷ್ಟದಲ್ಲಿರುವಾಗ ಗಾಂಧಿ ಕುಟುಂಬ ಮಧ್ಯ ಪ್ರವೇಶ ಮಾಡಿದೆ. ಮಾನಸಿಕ ಕಿರುಕುಳ ನಿಡುವ ಉದ್ದೇಶದಿಂದ ಸುಳ್ಳು ಕೇಸ್ ಹಾಕಲಾಗಿದೆ ಎಂದರು.

ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮಾತನಾಡಿ, ಡಬಲ್ ಇಂಜಿನ್ ಸರ್ಕಾರ ಆಡಳಿತ ಮಾಡುವಲ್ಲಿ ವಿಫಲವಾಗಿದೆ. ವಿರೋಧ ಪಕ್ಷಗಳಿಗೆ ಕಿರುಕುಳ ನೀಡುವ ನಿಟ್ಟಿನಲ್ಲಿ ಹಾಗೂ ಅವರ ಆತ್ಮಸ್ಥೈರ್ಯ ಕುಗ್ಗಿಸುವ ನಿಟ್ಟಿನಲ್ಲಿ ನೋಟಿಸ್ ನೀಡಲಾಗಿದೆ. ಅಕ್ರಮ ಹಣ ಎಲ್ಲಿ ವರ್ಗಾವಣೆ ಆಗಿದೆ? ಇ.ಡಿ ಕೇಂದ್ರದ ಕೈಗೊಂಬೆಯಾಗಿದೆ ಎಂದು ಆರೋಪಿದರು.

ಉ.ಪ್ರ.: ಹಿಂಸೆಯ ಮಾಸ್ಟರ್‌ಮೈಂಡ್‌ನ ಅಕ್ರಮ ಮನೆ ಜೆಸಿಬಿ ಬಳಸಿ ಧ್ವಂಸ – Vishwanews24

Leave a Reply