ಸೌದಿ ಅರೇಬಿಯದ 24×7 ಖ್ಯಾತಿಯ ಶ್ರೀ ಸತೀಶ್ ಕುಮಾರ್ ಬಜಾಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ – Vishwanews24
ಸೌದಿ ಅರೇಬಿಯದ 24×7 ಖ್ಯಾತಿಯ ಶ್ರೀ ಸತೀಶ್ ಕುಮಾರ್ ಬಜಾಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ – Vishwanews24
ಮಂಗಳೂರು: ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾದ ಅಧ್ಯಕ್ಷ, ಸೌದಿ ಅರೇಬಿಯಾದ ಜನಸ್ನೇಹಿ 24×7 ಖ್ಯಾತಿಯ ಸತೀಶ್ ಕುಮಾರ್ ಬಜಾಲ್ ಅವರು ಡಿ.5ರ ಭಾನುವಾರ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿದ್ದು, ದರ್ಶನ ಪಡೆದಿದ್ದಾರೆ.
ಕ್ಷೇತ್ರದಪುನರುತ್ಥಾನಕ್ಕೆ ಮತ್ತು ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸೌದಿ ಅರೇಬಿಯದ ಸಂಚಾಲಕರಾಗಿ ಕ್ಷೇತ್ರಕ್ಕೆ ಸಲ್ಲಿಸಿರುವ ವಿಶೇಷ ಸೇವೆಯನ್ನು ಗುರುತಿಸಿ ಶ್ರೀಯುತರಿಗೆ ಕ್ಷೇತ್ರದ ವತಿಯಿಂದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲ್ ಅವರು ಸ್ಮರಣಿಕೆಯನ್ನು ನೀಡಿ ಸತ್ಯಧರ್ಮ ಚಾವಡಿಯಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಯುತರ ಆತ್ಮೀಯರಾದ ನವಚೇತನ ಸೇವಾ ಬಳಗ ತೋಡಾರ್ ಇದರ ಸಂಸ್ಥಾಪಕ ಅಧ್ಯಕ್ಷ ಸುಕೇಶ್ ಜಿಅಂಚನ್, ಹಿಂದೂ ಜಾಗರಣವೇಧಿಕೆಯ ಮಾಜಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರತ್ ಪದವಿನಂಗಡಿ, ದ.ಕನ್ನಡ ಜಿಲ್ಲಾ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ದೀರಾಜ್ ಪೂಜಾರಿ, ಬಿಲ್ಲವ ವಾರಿಯರ್ಸ್ನ ಅಡ್ಮಿನ್ ಪುಷ್ಮರಾಜ್ , ಶಾಯಿ ದೀಕ್ಷಿತ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ಧರು.
