ಹಿಂದುಗಳ ಭಾವನೆಗೆ ಧಕ್ಕೆ – ಸುರತ್ಕಲ್ ಹಿಂದೂ ಜಾಗರಣ ವೇದಿಕೆಯ ವತಿಯಿಂದ ನಟ ಚೇತನ್ ವಿರುದ್ಧ ದೂರು ದಾಖಲು – Vishwanews24
ಸುರತ್ಕಲ್ : ಹಿಂದುಗಳ ಭಾವನೆಗೆ ಧಕ್ಕೆ – ಹಿಂದೂ ಜಾಗರಣ ವೇದಿಕೆಯ ವತಿಯಿಂದ ನಟ ಚೇತನ್ ವಿರುದ್ಧ ದೂರು ದಾಖಲು
ಮಂಗಳೂರು: ಕಾಂತಾರ ಕನ್ನಡ ಚಲನ ಚಿತ್ರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿರುವ ಚಿತ್ರ ನಟ ಚೇತನ್ ಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಸುರತ್ಕಲ್ ಸಮಿತಿ ಆರೋಪಿಸಿದ್ದು, ಖಂಡಿಸಿ ಚೇತನ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಪುಷ್ಪರಾಜ್ ಕುಳಾಯಿ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣಾಧಿಕಾರಿಗೆ ದೂರು ಸಲ್ಲಿಸಲಾಯಿತು.
ಬಂಟ್ವಾಳ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ – Vishwanews24
ಚಿತ್ರ ನಟ ಚೇತನ್ ಕುಮಾರ್ ಅವರು ಕಾಂತಾರ ಚಲನಚಿತ್ರವು ಸಮಸ್ತ ಹಿಂದೂ ಸಮಾಜಕ್ಕೆ ಸಂಬಂಧಿಸಿದ ಚಿತ್ರವಾಗಿದೆ.ಅದರೆ ನಟ ಚೇತನ್ ಕುಮಾರ್ ಹಿಂದೂ ಧರ್ಮ ಮತ್ತು ದೈವಕ್ಕೆ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿರುವುದು ಇಲ್ಲ ಸಲ್ಲದ ಆರೋಪವಾಗಿದೆ.
ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಯತ್ನವಾಗಿದೆ. ಇದು ಹಿಂದುಗಳ ಭಾವನೆಗೆ ಧಕ್ಕೆ ತರುವ ಹೇಳಿಕೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
