ಹಿಜಾಬ್ ಬೇಡವೆಂದ್ರೇ ಶಿಕ್ಷಣವೇ ಬೇಡ, ಎಕ್ಸಾಂ ಬೇಡ ; ತರಗತಿ, ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು – Vishwanews24

Featured, ರಾಜ್ಯ ನ್ಯೂಸ್

 ಹಿಜಾಬ್ ಬೇಡವೆಂದ್ರೇ ಶಿಕ್ಷಣವೇ ಬೇಡ, ಎಕ್ಸಾಂ ಬೇಡ ; ತರಗತಿ, ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು – Vishwanews24

ಕಲಬುರ್ಗಿ/ವಿಜಯಪುರ: ರಾಜ್ಯ ಹೈಕೋರ್ಟ್ ನಿನ್ನೆ ನೀಡಿದಂತ ಸಮವಸ್ತ್ರ ಪಾಲನೆ ಕಡ್ಡಾಯದ ಆದೇಶಕ್ಕೂ ಡೋಂಟ್ ಕೇರ್ ಎಂದಿರುವಂತ ವಿದ್ಯಾರ್ಥಿನಿಯರು, ಇಂದು ಕೂಡ ಹಿಜಾಬ್ ಬೇಡವೆಂದ್ರೇ ಶಿಕ್ಷಣವೇ ಬೇಡ, ಎಕ್ಸಾಂ ಬೇಡ, ಹಿಜಾಬ್ ಬೇಕು ಎಂಬುದಾಗಿ ಹೇಳುವ ಮೂಲಕ ತರಗತಿ, ಪರೀಕ್ಷೆಯನ್ನು ಬಹಿಷ್ಕರಿಸಿ ಮನೆಗೆ ವಾಪಾಸ್ ಆಗಿರುವಂತ ಘಟನೆ ಕಲಬುರ್ಗಿ, ವಿಜಯಪುರದಲ್ಲಿ ನಡೆದಿದೆ.

ಕಲಬುರ್ಗಿಯ ಸರ್ಕಾರಿ ಪಿಯು ಕಾಲೇಜಿಗೆ ಹಿಜಾಬ್ ಧರಿಸಿ ಆಗಮಿಸಿದಂತ ವಿದ್ಯಾರ್ಥಿನಿಯರಿಗೆ, ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಹಿಜಾಬ್ ತೆಗೆದು ತರಗತಿಗೆ ಹಾಜರಾಗುವಂತೆ ಸೂಚನೆಯನ್ನು ಪ್ರಿನ್ಸಿಪಾಲರು ನೀಡಿದರು. ಆದ್ರೇ.. ಹಿಜಾಬ್ ತೆಗೋಯಲ್ಲ ಎಂಬುದಾಗಿ ಕಾಲೇಜಿನಲ್ಲಿ ಹಠ ಹಿಡಿದರು.

ಜೊತೆಗೆ 10 – 12 ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿ, ನಮಗೆ ಹಿಜಾಬ್ ಬೇಡವೆಂದ್ರೇ ಶಿಕ್ಷಣವೇ ಬೇಡ ಎಂಬುದಾಗಿ ಹೇಳುವ ಮೂಲಕ, ಮನೆಗೆ ವಾಪಾಸ್ ಆಗಿರೋದಾಗಿ ತಿಳಿದು ಬಂದಿದೆ.

ಮತ್ತೊಂದೆಡೆ ವಿಜಯಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂದು ಪಿಯು ಪ್ರಾಕ್ಟಿಕಲ್ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಗೆ ಹಿಜಾಬ್ ಧರಿಸಿ ಆಗಮಿಸಿದಂತ ವಿದ್ಯಾರ್ಥಿನಿಯರು, ಏನೇ ಆದ್ರೂ ಹಿಜಾಬ್ ಬಿಡೋದಿಲ್ಲ ಎಂಬುದಾಗಿ ಹಠ ಹಿಡಿದಿದ್ದಾರೆ. ನಾವು ಹಿಜಾಬ್ ತೆಗೆಯೋದಾದ್ರೇ ಕಾಲೇಜಿಗೆ ಬರೋದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬರೋವರೆಗೆ ಕಾಯುತ್ತೇವೆ. ಹಿಜಾಬ್ ತೆಗೆಯಲು ದೇವರ ಭಯವಿದೆ ಎಂಬುದಾಗಿ ಮನೆಗೆ ಪರೀಕ್ಷೆ ಬರೆಯದೇ ವಾಪಾಸ್ ಆಗಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ರಾಜೀನಾಮೆ – Vishwanews24

Leave a Reply