ಹಿಜಾಬ್ ವಿವಾದ : ಸೂಕ್ತ ತನಿಖೆಯನ್ನು ನಡೆಸಿ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ವಿದ್ರೋಹಿಗಳ ಸಂಚು ಮತ್ತು ಜಾಲವನ್ನು ಬಯಲಿಗೆಳೆಯಬೇಕು : ಕುಯಿಲಾಡಿ ಸುರೇಶ್ ನಾಯಕ್ – Vishwanews24
ಹಿಜಾಬ್ ವಿವಾದ : ಅಂತಾರಾಷ್ಟ್ರೀಯ ಮುಸ್ಲಿಂ ಸಂಘಟನೆಗಳ ಆರ್ಥಿಕ ನೆರವು ಇದೆ ಎಂಬ ಗುಮಾನಿ ಇದೆ
ಉಡುಪಿ ಜಿಲ್ಲೆ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಈಗ ಚರ್ಚೆಯಲ್ಲಿರುವ ಹಿಜಾಬ್ ಕುರಿತ ವಿವಾದದ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ. ಇದನ್ನು ಭೇದಿಸಬೇಕು ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸರಕಾರವನ್ನು ಆಗ್ರಹಿಸಿದ್ದಾರೆ.
ಸಿಎಫ್ಐ ಮೂಲಕ ಈ ಕೆಲಸ ಆಗುತ್ತಿದ್ದು ಇದಕ್ಕೆ ಅಂತಾರಾಷ್ಟ್ರೀಯ ಮುಸ್ಲಿಂ ಸಂಘಟನೆಗಳ ಆರ್ಥಿಕ ನೆರವು ಇದೆ ಎಂಬ ಗುಮಾನಿ ಇದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿಗಳಾದ ಮೆಹಬೂಬ ಮುಫ್ತಿ ಮತ್ತು ಒಮರ್ ಅಬ್ದುಲ್ಲಾರ ಮಾತು ಹಾಗೂ ಅಂತಾರಾಷ್ಟ್ರೀಯ ಚಾನಲ್ ಗಳು ಇದನ್ನು ಪದೇ ಪದೇ ಬಿತ್ತರಿಸುವುದು ನೋಡಿದರೆ ಈ ಗುಮಾನಿಗೆ ಇನ್ನಷ್ಟು ಪುಷ್ಟಿ ಬರುತ್ತದೆ.
ದೇಶದ ಆಂತರಿಕ ಭದ್ರತೆಯ ಹಿತ ದೃಷ್ಠಿಯಿಂದ ಸರಕಾರ ಶೀಘ್ರವಾಗಿ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ವಿದ್ರೋಹಿಗಳ ಸಂಚು ಮತ್ತು ಜಾಲವನ್ನು ಬಯಲಿಗೆಳೆಯಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ .
