ಉಡುಪಿ: ಅಡಿಕೆ ಮರದಿಂದ ಬಿದ್ದು ಬೇಕರಿ ಮಾಲಕ ಶ್ಯಾಮ್ ಅಂಚನ್ ಮೃತ್ಯು – Vishwanews24

Featured, ಉಡುಪಿ

ಉಡುಪಿ: ಅಡಿಕೆ ಮರದಿಂದ ಬಿದ್ದು ಬೇಕರಿ ಮಾಲಕ ಶ್ಯಾಮ್ ಅಂಚನ್ ಮೃತ್ಯು

ಉಡುಪಿ: ಅಡಿಕೆ ಕೊಯ್ಯಲು ಮರ ಹತ್ತಿದಾಗ ಮರ ತುಂಡಾಗಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿ ನಗರದಲ್ಲಿ ನಡೆದಿದೆ.

ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಸಮೀಪ ಮಠದ ಬೆಟ್ಟು ವಿನ ಕಂಗಿನ ತೋಟ ಹೌಸ್ ನಿವಾಸಿ ಬೇಕರಿ ಮಾಲಕ ಶ್ಯಾಮ್ ಅಂಚನ್ (59) ಮೃತಪಟ್ಟವರು.

ಇವರು ಅಡಿಕೆ ಕೊಯ್ಯಲು ಅಡಿಕೆ ಮರ ಹತ್ತಿದಾಗ ಮರ ತುಂಡಾಗಿ ಬಿದ್ದು ಗಂಭೀರ ಅಸ್ವಸ್ಥ ಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಅವರು ಜ.12ರಂದು ನಿಧನರಾಗಿದ್ದಾರೆ.

ವಿಟ್ಲ: ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ ವಿಚಾರಕ್ಕೆ ಅನ್ಯ ಕೋಮಿನ ವಿದ್ಯಾರ್ಥಿಗೆ ಹಲ್ಲೆ ; ಪ್ರಕರಣ ದಾಖಲು – Vishwanews24

ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಇವರು ಓರ್ವ ಉತ್ತಮ ಕೃಷಿಕನಾಗಿದ್ದು, ಪರ್ಕಳದ ಹೃದಯ ಭಾಗದಲ್ಲಿ ಪಾಲುದಾರಿಕೆಯಲ್ಲಿ ಬೇಕರಿ ನಡೆಸುತ್ತಿದ್ದರು.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Leave a Reply