ಉಡುಪಿ ಕೃಷ್ಣ ಮಠ: ಪಂಚಮುಖಿ ಹನುಮಂತನ ವಿಗ್ರಹ ಸ್ಥಳಾಂತರ – vishwanews24

Featured, ಉಡುಪಿ

ಉಡುಪಿ ಕೃಷ್ಣ ಮಠ: ಪಂಚಮುಖಿ ಹನುಮಂತನ ವಿಗ್ರಹ ಸ್ಥಳಾಂತರ

ಉಡುಪಿ: ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಜನಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಪಂಚಮುಖಿ ಹನುಮಂತನ ವಿಗ್ರಹವನ್ನು ಶೀರೂರು ಮೂಲಮಠಕ್ಕೆ ಸ್ಥಳಾಂತರಿಸಲಾಗಿದೆ.

ಈ ವಿಗ್ರಹವನ್ನು ಬಡಗುಮಾಳಿಗೆ ಎದುರಿನ ಪರಿಸರದಲ್ಲಿ ಶೀರೂರು ಮಠದ ಹಿಂದಿನ ಪರ್ಯಾಯದಲ್ಲಿ ಇಡಲಾಗಿತ್ತು. ಇದಕ್ಕೆ ಪ್ರಾಣ ಪ್ರತಿಷ್ಠೆ ಮೊದಲಾದ ಯಾವುದೇ ಪ್ರತಿಷ್ಠಾಪನಾದಿಗಳು, ಪೂಜೆಗಳು ನಡೆದಿಲ್ಲ. ಭಕ್ತರ ದಟ್ಟಣೆ ಸಂದರ್ಭ ಓಡಾಟಕ್ಕೆ ಆಡಚಣೆಯಾಗದಿರಲಿ ಎಂದು ಇದನ್ನು ಶೀರೂರು ಮೂಲ ಮಠಕ್ಕೆ ಸ್ಥಳಾಂತರಿಸಲಾಗಿದೆ ಎಂದು ದಿವಾನರಾದ ಡಾ| ಉದಯಕುಮಾರ್ ಸರಳತ್ತಾಯರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿರುವ 80ರ ದಶಕದ ಫೋಟೋಗಳು: ಸಾರ್ವಜನಿಕರಿಗೆ ಪೊಲೀಸರಿಂದ ಎಚ್ಚರಿಕೆ – vishwanews24

Leave a Reply