ಉಡುಪಿ : ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ಉಚಿತ ತರಭೇತಿ ಕಾರ್ಯಗಾರ – vishwanews24
ಉಡುಪಿ : ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ಉಚಿತ ತರಭೇತಿ ಕಾರ್ಯಗಾರ
ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಸಿವಿಲ್ ಪೋಲಿಸ್ ಕಾನ್ಸ್ಟೇಬಲ್ 3395 ಹುದ್ದೆ ಹಾಗೂ ಸಶಸ್ತ್ರ ಪೋಲಿಸ್ ಕಾನ್ಸ್ಟೇಬಲ್ 1421 ಹುದ್ದೆಗೆ ಸರ್ಕಾರ ಅರ್ಜಿಯನ್ನು ಕರೆದಿದ್ದು ಸದ್ರಿ ಹುದ್ದೆಗೆ ನಿಗದಿಪಡಿಸಿದ ಲಿಖಿತ ಪರೀಕ್ಷೆಗೆ ಸಂಭದಿಸಿದ0ತೆ ದಿನಾಂಕ:05/07/2026 ರಂದು ಭಾನುವಾರ ಬೆಳಗ್ಗೆ09.00 ರಿಂದ ಸಂಜೆ 5.00ಗಂಟೆಯವರೆಗೆ ಕೋಟ ಶಿವರಾಮ ಕಾರಂತ ಥೀಂ ಪಾರ್ಕ ನಲ್ಲಿ ವಿ-ಶ್ಯೆನ್ ಕೋಚಿಂಗ್ ಸೆಂಟರ್ ಕೋಟ ಹಾಗೂ ಓಂ ಪ್ರೆಂಡ್ಸ ಕುಂದಾಪುರ ಇವರ ಸಹ ಬಾಗಿತ್ವದಲ್ಲಿ ಉಚಿತ ತರಭೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ – vishwanews24
ಕಾರ್ಯಗಾರದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಭಾಗಿವಹಿಸಲಿದ್ದಾರೆ. ಈ ಕಾರ್ಯಗಾರವನ್ನು ಉಡುಪಿ ಚಿಕ್ಕಮಂಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಲ್ಲಿದ್ದು ಸಭಾ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೋಡ್ಗಿರವರು,ಮತ್ತು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆರವರು ಹಾಗೂ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯವರಾದ ಶ್ರೀ ಹರಿ ರಾಮ್ ಶಂಕರ್ ಮತ್ತು ಇನ್ನಿತರ ಗಣ್ಯರು ಸದ್ರಿ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಕಳ : ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಆರೋಪಿ ಸೌಮ್ಯ ಶೆಟ್ಟಿ ಜಾಮೀನು ನಿರಾಕರಿಸಿದ ಹೈಕೋರ್ಟ್ – vishwanews24
ಸದ್ರಿ ಕಾರ್ಯಗಾರಕ್ಕೆ ಉಡುಪಿ ಜಿಲ್ಲೆಯ ಹಾಗೂ ಕರಾವಳಿ ಜಿಲ್ಲೆಯ ಸ್ಪರ್ದಾ ಅಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದ್ರಿ ಕಾರ್ಯಗಾರದ ಪ್ರಯೋಜನ ಪಡೆಯುವಂತೆ ಕಾಪು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9980040551 / 8277027118
