ಉಡುಪಿ : ಪ್ರಮೋದ್‌ ಬಿಜೆಪಿ ಸೇರ್ಪಡೆ : ಕಾಂಗ್ರೆಸ್ ಪಕ್ಷ ಇರುವುದು ಕಾರ್ಯಕರ್ತರಿಂದಲೇ ಹೊರತು ನಾಯಕರಿಂದಲ್ಲ : ಹಮ್ಮದ್‌ – Vishwanews24

Featured, ಉಡುಪಿ

ಉಡುಪಿ : ಪ್ರಮೋದ್‌ ಬಿಜೆಪಿ ಸೇರ್ಪಡೆ : ಕಾಂಗ್ರೆಸ್ ಪಕ್ಷ ಇರುವುದು ಕಾರ್ಯಕರ್ತರಿಂದಲೇ ಹೊರತು ನಾಯಕರಿಂದಲ್ಲ : ಹಮ್ಮದ್‌

ಉಡುಪಿ: ಕಾಂಗ್ರೆಸ್‌ ಪಕ್ಷ ಸಾಗರದಂತೆ, ಅದರಿಂದ ಒಂದು ಬೊಗಸೆ ನೀರು ತೆಗೆದರೆ ಸಾಗರ ಖಾಲಿಯಾಗುವ ಪ್ರಶ್ನೆಯೇ ಇಲ್ಲ ಹಾಗೆಯೇ ಪಕ್ಷದಲ್ಲಿ ನಾಯಕರಿಗೆ ಕೊರತೆ ಇಲ್ಲ. ಇಂದು ಪಕ್ಷ ಒಬ್ಬ ನಾಯಕನನ್ನು ಕಳೆದುಕೊಂಡಿರಬಹುದು, ಪಕ್ಷ ಕಾರ್ಯಕರ್ತರಿಂದಲೇ ಹೊರತು ನಾಯಕರಿಂದಲ್ಲ ಎಂದು ಉಡುಪಿ ಬ್ಲಾಕ್‌ ಯುವ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷರಾದ ಹಮ್ಮದ್‌ ಉಡುಪಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಪ್ರಮೋದ್ ಮಧ್ವರಾಜ್ ಅವರಿಗೆ ಎಲ್ಲಾ ಸ್ಥಾನಮಾನವನ್ನು ನೀಡಿದ್ದು, ನಿರಂತರವಾಗಿ 2004 ಮತ್ತು 2008 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, ವಿಧಾನಸಭಾ ಚುನಾವಣೆಯಲ್ಲಿ ಸತತ ನಾಲ್ಕು ಬಾರಿ ಸ್ಪರ್ಧೆ ಮಾಡಲು ಅವಕಾಶಗಳನ್ನು ನೀಡಿದೆ. 2013 ಮಾತ್ರ ಗೆಲುವನ್ನು ಸಾಧಿಸಿದ್ದರು, ಪ್ರಥಮವಾಗಿ ಶಾಸಕರಾಗಿದ್ದ ಇವರನ್ನು ಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಕ್ಷ ನೀಡಿದೆ.

ಇಷ್ಟೆಲ್ಲಾ ಅವಕಾಶವನ್ನು ನೀಡಿಯೂ ಪಕ್ಷದ ಬಗ್ಗೆ ಅಗೌರವ ತೋರಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ ಗೊಂಡಿರುವುದು ವೈಯಕ್ತಿಕವಾಗಿ ನನಗೆ ನೋವಾಗಿರಬಹುದು. ಆದರೆ ಕಾರ್ಯಕರ್ತರು ಯಾರೂ ಅವರ ಹಿಂದೆ ಹೋಗಿರುವುದಿಲ್ಲ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ, ಕಾರ್ಯಕರ್ತರು ಎದೆಗುಂದುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಬಿಜೆಪಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ, ಹಾಗಾಗಿ ಇಂತಹ ಬಿಜೆಪಿಯ ಯಾವುದೇ ಷಡ್ಯಂತ್ರಗಳು ಮುಂದಿನ ಚುನಾವಣೆಯಲ್ಲಿ ಫಲಿಸೋದಿಲ್ಲ. ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ರೈತ ಶಕ್ತಿ ಯೋಜನೆಯಡಿ ರೈತ ಸಹಾಯಧನ – Vishwanews24

Leave a Reply