ಉಡುಪಿ: ಮಸೀದಿಗಳಲ್ಲಿ ಕೊರೊನಾ ಮಾರ್ಗಸೂಚಿ ಕಡ್ಡಾಯ ಪಾಲಿಸಿ ; ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ -Vishwanews24
ಉಡುಪಿ: ಮಸೀದಿಗಳಲ್ಲಿ ಕೊರೊನಾ ಮಾರ್ಗಸೂಚಿ ಕಡ್ಡಾಯ ಪಾಲಿಸಿ ; ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ -Vishwanews24
ಉಡುಪಿ : ಕೋವಿಡ್-19 ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಜಾರಿಗೊಳಿಸಿದ ಮಾರ್ಗಸೂಚಿ ಆದೇಶವನ್ನು ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಪಾಲನೆ ಮಾಡುವ ಮೂಲಕ ಸಮುದಾಯದ, ಸಮಾಜದ ಮತ್ತು ದೇಶದ ಆರೋಗ್ಯ ಕಾಪಾಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ ಮಾಡಿದೆ.
ಮತ್ತೊಮ್ಮೆ ಕೋವಿಡ್-19 ನಮಗೆ ಎದುರಾಗಿದೆ. ಈ ಹಿಂದಿನಂತೆ ಸಾಕಷ್ಟು ಮುತುವರ್ಜಿಯಿಂದ ಮುಂಜಾಗ್ರತೆ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪವಿತ್ರ ರಮ್ಜಾನ್ ತಿಂಗಳ ವ್ರತಾಚರಣೆಯ ಸಮಯವಾಗಿರುವ ಇಂದು ಮಸೀದಿಗಳಲ್ಲಿ ಈ ಹಿಂದಿನಂತೆ ಕಟ್ಟುನಿಟ್ಟಿನ ಕೋವಿಡ್ ನಿಯಮಾವಳಿ ಪಾಲಿಸುವ ಮೂಲಕ ಕೋವಿಡ್ ಎರಡನೇ ಅಲೆಯನ್ನು ತಡೆಯಬಹುದಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾತ್ರಿ ಕರ್ಫ್ಯೂ : ಕಲಾವಿದರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಿ : ಜಿಲ್ಲಾಧಿಕಾರಿಗೆ ಮನವಿ -Vishwanews24
ಆದುದರಿಂದ ಮಸೀದಿ ಜಮಾಅತ್ ಗಳು ಮತ್ತು ಸ್ವಯಂ ಸೇವಕರು ಮಸೀದಿಗೆ ಬರುವ ಪ್ರಾರ್ಥನಾರ್ಥಿಗಳ ಟೆಂಪರೇಚರ್, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ -ಮುಸಲ್ಲಾ ಮತ್ತು ನಮಾಝ್ ನಿರ್ವಹಿಸುವವರ ನಡುವಿನ ಅಂತರ ಇತ್ಯಾದಿ ಬಗ್ಗೆ ನಿಗಾ ಇರಿಸಬೇಕು. ವಯೋವೃದ್ಧರು ಮತ್ತು ಮಕ್ಕಳು ಮನೆಯಲ್ಲಿಯೇ ನಮಾಝನ್ನು ನಿರ್ವಹಿಸಬೇಕು. ಉಳಿದಂತೆ ಮುಸಲ್ಲಿಗಳು ಮಸೀದಿಯ ಮೇಲ್ವಿಚಾರಕರೊಂದಿಗೆ ಸಂಪೂರ್ಣವಾಗಿ ಸಹಕರಿಸುವ ಮೂಲಕ ಸರಳವಾದ ಆರೋಗ್ಯ ಪೂರ್ಣ ರಮ್ಜಾನ್ ವ್ರತಾಚರಣೆ ಕೈಗೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.
ರಾಜ್ಯಪಾಲರ ಜತೆ ಸಭೆ ಮುಗಿದ ಬಳಿಕ ಖಂಡಿತ ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿಯಾಗಲಿದೆ : ಆರ್. ಅಶೋಕ್ -Vishwanews24
