ಕಟಪಾಡಿ : ಎರಡು ವರ್ಷದಿಂದ ಸಾರ್ವಜನಿಕ ಶೌಚಾಲಯ ಬಂದ್ , ಖಾಲಿ ಬಾಟಲಿಗಳಲ್ಲಿ ಮೂತ್ರ ವಿಸರ್ಜನೆ – Vishwanews24

Featured, ಉಡುಪಿ

ಕಟಪಾಡಿ : ಎರಡು ವರ್ಷದಿಂದ ಸಾರ್ವಜನಿಕ ಶೌಚಾಲಯ ಬಂದ್ ..

ಖಾಲಿ ಬಾಟಲಿಗಳಲ್ಲಿ ಮೂತ್ರ ವಿಸರ್ಜನೆ ..

ಗ್ರಾಮಸ್ಥರು ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣ..

ಶೌಚಾಲಯದ ಬಗ್ಗೆ ಪಂಚಾಯತ್, ಸ್ಥಳೀಯ ಶಾಸಕರು ಗಮನವಹಿಸದೆ ಇರುವುದು ವಿಪರ್ಯಾಸ..

ಉಡುಪಿ: ಜಿಲ್ಲೆಯ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ಎರಡು ವರ್ಷದಿಂದ ಕಾರ್ಯಚರಿಸದೆ ಅಲ್ಲಿಯ ಜನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಉಡುಪಿ ಜಿಲ್ಲೆಯ ಕಟಪಾಡಿ ಪೇಟೆಯ ಹೃದಯ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯ ಸುಮಾರು ಎರಡು ವರ್ಷದಿಂದ ಬಂದ್ ಆಗಿದ್ದು, ಇಂದಿಗೂ ಗ್ರಾಮಸ್ಥರು ಪ್ರಯಾಣಿಕರು ರಿಕ್ಷಾ ಚಾಲಕರು ಮೂತ್ರ ವಿಸರ್ಜನೆಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಕಟಪಾಡಿ ಜಂಕ್ಷನ್ ಗೆ ನಾಲ್ಕು ಊರಿಂದ ಪ್ರಯಾಣಿಕರು ಬರುತ್ತಾರೆ. ಶಿರ್ವ, ಕಾಪು, ಪಡುಕೆರೆ ಉದ್ಯಾವರ ಭಾಗದ ಜನರು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕಟಪಾಡಿ ಪೇಟೆಯಲ್ಲಿರುವ ರಿಕ್ಷಾ ಚಾಲಕರು, ಟೆಂಪೋ ಚಾಲಕರು, ಅಂಗಡಿ ಕೆಲಸದವರು,ಹೊರ ರಾಜ್ಯದ ಕೂಲಿ ಕಾರ್ಮಿಕರು ದಿನನಿತ್ಯ ಬಹಿರ್ದೆಸೆಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಮೀನು ಮಾರುಕಟ್ಟೆಯ ಶೌಚಾಲಯ, ಹೋಟೆಲ್ ಶೌಚಾಲಯ, ಕೆಲವೊಂದು ಮನೆಯ ಶೌಚಾಲಯಗಳನ್ನು ಸ್ಥಳೀಯರು ಉಪಯೋಗಿಸುವಂಥಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 25 ರಂದು ಸರಳ ಸಾಮೂಹಿಕ ವಿವಾಹ ; ಅರ್ಜಿ ಸಲ್ಲಿಸಲು ಆಗಸ್ಟ್ 4 ಕೊನೆಯ ದಿನ – Vishwanews24

ಮಧುಮೇಹ ಇರುವವರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಿಯಂತ್ರಿಸಲು ಸಾಧ್ಯವಾಗದೆ ಜನ ಖಾಲಿ ಬಾಟಲಿಗಳಲ್ಲಿ ಮೂತ್ರ ವಿಸರ್ಜಿಸಿ ಅದನ್ನು ಅಲ್ಲೆ ಇಡುತ್ತಿದ್ದಾರೆ. ಇದರಿಂದ ಸೊಳ್ಳೆ ಕಾಟವೂ ಹೆಚ್ಚುವ ಸಂದರ್ಭವಿದ್ದು ಸಾಂಕ್ರಾಮಿಕ ರೋಗ ಹರಡಲು ಕೂಡಾ ಪರೋಕ್ಷವಾಗಿ ಕಾರಣವಾಗುತ್ತಿದೆ.

ಜನರ ಮೂಲಭೂತ ಅವಶ್ಯಕತೆ ಆದ ಶೌಚಾಲಯದ ಬಗ್ಗೆಯೂ ಪಂಚಾಯತ್, ಸ್ಥಳೀಯ ಶಾಸಕರು ಗಮನವಹಿಸದೆ ಇರುವುದು ವಿಪರ್ಯಾಸ.

ಕಟಪಾಡಿ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕೂಡಲೇ ಸಾರ್ವಜನಿಕ ಶೌಚಾಲಯವನ್ನು ಜನರ ಉಪಯೋಗಕ್ಕೆ ಸಜ್ಜು ಮಾಡಿಕೊಡಬೇಕಾಗಿದೆ.

ಭಾರತೀಯ ನೌಕಾಪಡೆಗೆ ʻಅಗ್ನಿವೀರ್ʼರ ನೇಮಕ: ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ ; ಹೀಗಿದೆ ಅರ್ಹತೆ , ಆಯ್ಕೆ ಪ್ರಕ್ರಿಯೆ – Vishwanews24

Leave a Reply