ಕೆ.ವಾಸದೇವ ಶೆಟ್ಟಿಯವರಿಂದ ಕಾಪು ಪುರಸಭಾ ಪೌರಕಾರ್ಮಿಕರಿಗೆ ರೇಷನ್ ಕಿಟ್ ಹಾಗೂ ತಲಾ ಒಂದು ಸಾವಿರ ನಗದು ವಿತರಣೆ.
ಕೆ.ವಾಸದೇವ ಶೆಟ್ಟಿಯವರಿಂದ ಕಾಪು ಪುರಸಭಾ ಪೌರಕಾರ್ಮಿಕರಿಗೆ ರೇಷನ್ ಕಿಟ್ ಹಾಗೂ ತಲಾ ಒಂದು ಸಾವಿರ ನಗದು ವಿತರಣೆ.
ಕಾಪು: ಕಾಪು ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಅಮ್ಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿಯವರ ವತಿಯಿಂದ ರೇಷನ್ ಕಿಟ್ ವಿತರಿಸುವ ಕಾರ್ಯ ಮತ್ತು ತಲಾ ಒಬ್ಬರಿಗೆ ಒಂದು ಸಾವಿರ ರೂಪಾಯಿ ನಗದು ನೀಡುವ ಕಾರ್ಯ ಕಾಪು ಪುರಸಭೆಯಲ್ಲಿನಡೆಯಿತು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಕಿಟ್ ವಿತರಿಸಿದರು.
ಕಿಟ್ ಕೊಡುಗೆ ನೀಡಿದ ಕೆ.ವಾಸುದೇವ ಶೆಟ್ಟಿ ಮಾತಾಡಿ ” ಇದುವರೆಗೆ ನಾಲ್ಕು ನೂರು ಕುಟುಂಬಗಳಿಗೆ ಅಮ್ಮ ಟ್ರಸ್ಟ್ ವತಿಯಿಂದ ಕಿಟ್ ವಿತರಿಸಿದ್ದು,ವಿಶೇಷವಾಗಿ ಕಾಪು ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ವಿಶೇಷವಾಗಿ ಗೌರವಿಸಿ ಅವರಿಗೆ ರೇಷನ್ ಕಿಟ್ ಮತ್ತು ತಲಾ ಒಂದು ಸಾವಿರ ನಗದು ವಿತರಣೆ ಮಾಡುತ್ತಿದ್ದೇವೆ.ಇವೆಲ್ಲವೂ ದೇವರ ಸೇವೆ ಎಂಬ ದೃಷ್ಟಿಯಿಂದ ಕಾರ್ಯ ನಡೆಯುತ್ತಿದೆ ಎಂದರು.
ಸುಮಾರು ಐವತ್ತು ಪೌರಕಾರ್ಮಿಕರಿಗೆ ತಲಾ ಒಂದು ಸಾವಿರದಂತೆ ಐವತ್ತು ಸಾವಿರ ಪ್ರೋತ್ಸಾಹಕರ ಧನಸಹಾಯ ಮಾಡಲಾಯಿತು.
ಈ ಸಂಧರ್ಭದಲ್ಲಿ ತಹಶಿಲ್ದಾರ್ ಮಹಮ್ಮದ್ ಇಸಾಕ್, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಟ್ರಸ್ಟಿಗಳಾದ ನಡಿಕೆರೆ ರತ್ನಾಕರ್ ಶೆಟ್ಟಿ, ಭೂಪತಿ ಶೆಟ್ಟಿ, ಹರೀಶ್ ಪೂಜಾರಿ,ಪುರಸಭಾ ಸದಸ್ಯ ಅನಿಲ್ ಕುಮಾರ್ , ಸುರೇಶ್ ದೇವಾಡಿಗ, ಮೊದಲಾದವರು ಉಪಸ್ಥಿತರಿದ್ದರು.

