ಕೊರೋನಾ ಆತಂಕದ ನಡುವೆ ಮೂಡುಬಿದಿರೆಯಲ್ಲಿಂದು ಸರಳ ಯಕ್ಷಗಾನೀಯ ಕೃಷ್ಣನ ಮೊಸರು ಕುಡಿಕೆ ಉತ್ಸವ -Vishwanews24

desha, ದಕ್ಷಿಣ ಕನ್ನಡ

ಕೊರೋನಾ ಆತಂಕದ ನಡುವೆ ಮೂಡುಬಿದಿರೆಯಲ್ಲಿಂದು ಸರಳ ಯಕ್ಷಗಾನೀಯ ಕೃಷ್ಣನ ಮೊಸರು ಕುಡಿಕೆ ಉತ್ಸವ -Vishwanews24

ಮೂಡುಬಿದಿರೆ: ಕೊರೋನಾ ಆತಂಕದ ದಿನಗಳ ತೀವ್ರತೆಯ ಏರಿಳಿತದ ನಡುವೆ ಅನ್ಲಾಕ್ ಆಗುತ್ತಿರುವ ಮೂಡುಬಿದಿರೆ ತಾಲೂಕಿನಲ್ಲಿ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯ ನಂತರದ ಮೊಸರು ಕುಡಿಕೆ ಉತ್ಸವ ಸಂಭ್ರಮ ಸರಳವಾಗಿ ಜರಗಲಿದೆ.

ಯಕ್ಷಗಾನೀಯ ಹಿಮ್ಮೇಳ ಸಹಿತ ವೇಷಧಾರಿ ಶ್ರೀಕೃಷ್ಣನೇ ಬೀದಿಗಳಲ್ಲಿ ಅಡ್ಡಲಾಗಿ ತೂಗು ಹಾಕಿರುವ ಮೊಸರ ಕುಡಿಕೆಗಳನ್ನು ಒಡೆಯುವ ವಿಶಿಷ್ಠ ಉತ್ಸವ ಕೊರೋನಾ ಆತಂಕದ ನಡುವೆಯೂ ಸರಳವಾಗಿ ನಡೆಯಲಿದೆ ಎನ್ನುವುದು ಜನತೆ ಒಂದಿಷ್ಟು ಸಂಭ್ರಮಕ್ಕೆ ತೆರೆದುಕೊಳ್ಳುವಂತಾಗಿದೆ.

ಮೂಡುಬಿದಿರೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸರಳವಾಗಿ ಯಶಸ್ವಿಯಾಗಿ ನಡೆದಿದ್ದು ಆ ಬಳಿಕ ಎರಡನೇ ಸಾರ್ವಜನಿಕ ಉತ್ಸವ ಇದಾಗಿದೆ. ಸಾಮಾಜಿಕ ಅಂತರದ ಕಾಯ್ದುಕೊಳ್ಳುವ ಅನಿವಾರ್ಯತೆಯೂ ಇದೆ. ಈಗಾಗಲೇ ಪೇಟೆಯಲ್ಲಿ ಸದ್ದು ಮಾಡಬೇಕಾಗಿದ್ದ ಹುಲಿಗಳು, ವೇಷಧಾರಿಗಳು, ಅಬ್ಬರ ಎಲ್ಲವೂ ಮಾಯವಾಗಿದ್ದು ಸಾಂಸ್ಕೃತಿಕ ಮೌನದಿಂದ ಹೊರಬರಲು ಮೂಡುಬಿದಿರೆ ಹವಣಿಸುತ್ತಿದೆ.