ನಿಂದಿಸಿದವರನ್ನು ಕ್ಷಮಿಸಲು ಬಯಸುತ್ತೇನೆ; ವಿದ್ಯಾರ್ಥಿಗಳಿಗೆ ಶಿಕ್ಷೆಯಲ್ಲ, ಮಾರ್ಗದರ್ಶನ ನೀಡಿ: ಪ್ರಧಾನಿ ಮೋದಿ ವೀಡಿಯೊ ಸಂದೇಶ – vishwanews24

Featured, ರಾಷ್ಟ್ರ ನ್ಯೂಸ್

ನಿಂದಿಸಿದವರನ್ನು ಕ್ಷಮಿಸಲು ಬಯಸುತ್ತೇನೆ; ವಿದ್ಯಾರ್ಥಿಗಳಿಗೆ ಶಿಕ್ಷೆಯಲ್ಲ, ಮಾರ್ಗದರ್ಶನ ನೀಡಿ: ಪ್ರಧಾನಿ ಮೋದಿ ವೀಡಿಯೊ ಸಂದೇಶ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ನೀಟ್ (NEET) ಪರೀಕ್ಷೆ ಅಕ್ರಮ ಖಂಡಿತ ಪ್ರತಿಭಟನೆಯ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಅಸಭ್ಯ ಮತ್ತು ನಿಂದನಾತ್ಮಕ ಪದ ಬಳಸಿದ್ದ ಯುವ ಪ್ರತಿಭಟನಾಕಾರರನ್ನು ಕರುಣೆಯಿಂದ ಕ್ಷಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ವೈಯಕ್ತಿಕ ಭಾವನಾತ್ಮಕ ವೀಡಿಯೊ ಸಂದೇಶ ಹಂಚಿಕೊಂಡ ಪ್ರಧಾನಿ, “ನನ್ನ ವಿರುದ್ಧ ಮತ್ತು ನನ್ನ ತೀರಿಹೋದ ತಾಯಿಯ ವಿರುದ್ಧ ಅಸಭ್ಯ ಭಾಷೆ ಬಳಸಿದ್ದು ಸಾಂಸ್ಕೃತಿಕ ಆಘಾತ ತಂದಿದೆ. ಆದರೆ, ದಾರಿತಪ್ಪಿದ ಯುವಜನತೆಗೆ ಶಿಕ್ಷೆ ವಿಧಿಸುವುದು, ಕೋರ್ಟ್-ಕಚೇರಿ ಅಲೆದಾಡಿಸುವುದು ಪರಿಹಾರವಲ್ಲ.

ನಾಲಿಗೆ ಹಲ್ಲಿಗೆ ಸಿಕ್ಕಿ ರಕ್ತ ಬಂದರೆ ನಾವು ಹಲ್ಲನ್ನು ಮುರಿಯುವುದಿಲ್ಲ; ಏಕೆಂದರೆ ನಾಲಿಗೆಯೂ ನಮ್ಮದೇ, ಹಲ್ಲೂ ನಮ್ಮದೇ. ಹಾಗೆಯೇ ಈ ಮಕ್ಕಳೂ ನಮ್ಮವರೇ. ಇವರನ್ನು ಆಲಂಗಿಸಿ ಸರಿದಾರಿಗೆ ತರುವುದು ನಮ್ಮ ಕರ್ತವ್ಯ,” ಎಂದಿದ್ದಾರೆ.

ಇದನ್ನೂ ಓದಿ:

ರೈಲ್ವೆಯಿಂದ ಬ್ಯಾಂಕ್‌ ಸೇವೆಗಳ ವರೆಗೆ ಹೊಸ ನಿಯಮ : ಇಂದಿನಿಂದ ದೇಶಾದ್ಯಂತ 5 ಪ್ರಮುಖ ಬದಲಾವಣೆ ಜಾರಿಗೆ  – vishwanews24

ಯುವಜನರನ್ನು ದಾರಿತಪ್ಪುವುದರಿಂದ ದೂರವಿಟ್ಟು ರಾಷ್ಟ್ರ ನಿರ್ಮಾಣದತ್ತ ಕೊಂಡೊಯ್ಯುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಬಾಲ್ಯದಲ್ಲಿ ತಪ್ಪುಗಳು ಆಗುತ್ತವೆ. ಆದರೆ ಅದೇ ಸಮಯದಲ್ಲಿ ಆ ತಪ್ಪುಗಳಿಂದ ಕಲಿಯುವ ಅವಕಾಶವೂ ಇರುತ್ತದೆ. ಅದೇ ಬಾಲ್ಯದ ಸ್ವಭಾವ. ಸಮಾಜದಲ್ಲಿರುವ ಆಕ್ರೋಶವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದಿದ್ದಾರೆ. ಈ ಘಟನೆಯನ್ನು “ಸಾಂಸ್ಕೃತಿಕ ಆಘಾತ” ಎಂದು ಬಣ್ಣಿಸಿದ ಪ್ರಧಾನಿ, ಪ್ರತಿಭಟನಾಕಾರರನ್ನು ಕ್ಷಮಿಸಲು ಬಯಸುವುದಾಗಿ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ತಪ್ಪುಗಳು ಆಗುತ್ತವೆ. ಆದರೆ ನಮ್ಮ ಹೆಣ್ಣುಮಕ್ಕಳು ಇಂತಹ ನಿಂದನಾತ್ಮಕ ಭಾಷೆ ಬಳಸುತ್ತಿರುವುದು ಸಾಂಸ್ಕೃತಿಕ ಆಘಾತವಾಗಿದೆ ಎಂದು ಹೇಳಿದ್ದಾರೆ.

ಪ್ರತೀಕಾರದ ಬದಲು ಕರುಣೆ ತೋರಿಸುವಂತೆ ಕರೆ ನೀಡಿದ ಅವರು, ಇದು ಈ ಮಕ್ಕಳನ್ನು ಅಪ್ಪಿಕೊಂಡು ಅವರಿಗೆ ಸರಿಯಾದ ದಾರಿ ತೋರಿಸುವ ಸಮಯ. ಅವರು ದಾರಿತಪ್ಪಿದ ಮಕ್ಕಳು. ಅವರಿಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ಇದನ್ನೂ ಓದಿ:

ಮಂಗಳೂರು: 2018ರ ಸಾಮೂಹಿಕ ಅತ್ಯಾಚಾರ ಪ್ರಕರಣ ; ನಾಲ್ವರು ಅಪರಾಧಿಗಳಿಗೆ 20 ವರ್ಷಗಳ ಕಠಿಣ ಜೈಲುಶಿಕ್ಷೆ – vishwanews24

ಅವರಿಗೆ ಶಿಕ್ಷೆ ವಿಧಿಸುವುದು, ನ್ಯಾಯಾಲಯಗಳ ಸುತ್ತ ಅಲೆದಾಡುವಂತೆ ಮಾಡುವುದು, ಸಮಾಜದಲ್ಲಿ ಕಿರುಕುಳ ನೀಡುವುದು ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ನನ್ನ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಪ್ರಧಾನ ಮಂತ್ರಿಗಳು, ಕೆಲವೊಮ್ಮೆ ನಮ್ಮ ನಾಲಿಗೆಯೇ ಹಲ್ಲಿಗೆ ಸಿಕ್ಕಿ ಕಚ್ಚಿಕೊಂಡು ರಕ್ತ ಬರುತ್ತದೆ. ಆದರೆ ಅದಕ್ಕಾಗಿ ನಾವು ಹಲ್ಲುಗಳನ್ನು ಮುರಿಯುವುದಿಲ್ಲ. ಏಕೆಂದರೆ ಹಲ್ಲುಗಳೂ ನಮ್ಮವು, ನಾಲಿಗೆಯೂ ನಮ್ಮದೇ. ಈ ಮಕ್ಕಳೂ ನಮ್ಮವರೇ. ಅವರಿಗೆ ದಾರಿ ತೋರಿಸುವುದು ನಮ್ಮ ಕರ್ತವ್ಯ. ದಾರಿತಪ್ಪಿದವರನ್ನು ಸರಿದಾರಿಗೆ ತರುವುದು ಕಷ್ಟದ ಕೆಲಸ, ಆದರೆ ಅದನ್ನೇ ನಾವು ಮಾಡಬೇಕು ಎಂದಿದ್ದಾರೆ. ಯುವಜನತೆಗೆ ನೇರವಾಗಿ ಮನವಿ ಮಾಡಿದ ಪ್ರಧಾನಿ, ಮಕ್ಕಳೇ, ದೇಶಕ್ಕಾಗಿ ಒಟ್ಟಾಗಿ ಮುಂದೆ ಸಾಗೋಣ. ಹೊಸದನ್ನು ಕಲಿಯೋಣ. ನಮ್ಮ ತಪ್ಪುಗಳಿಂದಲೂ ಪಾಠ ಕಲಿತು ನಮ್ಮ ಕನಸುಗಳೊಂದಿಗೆ ಮುಂದೆ ಸಾಗೋಣ ಎಂದಿದ್ದಾರೆ.

ಭರವಸೆಯ ಸಂದೇಶದೊಂದಿಗೆ ಭಾಷಣ ಮಾತುಗಳನ್ನು ಮುಗಿಸಿದ ಪ್ರಧಾನ ಮಂತ್ರಿ, ದೇಶ ಮುಂದೆ ಸಾಗುತ್ತಿದೆ, ಮುಂದೆಯೂ ಸಾಗುತ್ತದೆ. ನಿಮ್ಮ ಪ್ರಗತಿಯೂ ಖಚಿತ. ಅದೇ ನನ್ನ ಕನಸು. ನಾನು ನಿಮಗಾಗಿ ಬದುಕುತ್ತೇನೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತೇನೆ. ಬನ್ನಿ, ಒಟ್ಟಾಗಿ ದೇಶವನ್ನು ಮುನ್ನಡೆಸೋಣ. ತುಂಬಾ ಧನ್ಯವಾದಗಳು ಸ್ನೇಹಿತರೇ. ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗಿರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಭಾರಿಮಳೆ : ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿತ ; ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಜಿಲ್ಲಾಡಳಿತ ಎಚ್ಚರಿಕೆ – vishwanews24

ಜುಲೈ 23ರ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ದ್ವೇಷಪೂರಿತ ಭಾಷೆ ಬಳಸಿದ್ದ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ನೋಯ್ಡಾದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಾಗಿತ್ತು. ಈ ಘಟನೆಯ ಬೆನ್ನಲ್ಲೇ ಪ್ರಧಾನಿ ಈ ಸ್ಪಷ್ಟನೆ ನೀಡಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ಹೋರಾಟಗಾರ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ನಡೆದ 26 ದಿನಗಳ ಸತ್ಯಾಗ್ರಹ ಮತ್ತು ತೀವ್ರ ಪ್ರತಿಭಟನೆಗಳ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಜುಲೈ 25ರಂದು ಪ್ರತಿಭಟನೆ ಅಂತ್ಯಗೊಂಡಿತ್ತು

Leave a Reply